ಕರುಣಾನಿಧಿ ಕುಟುಂಬದ ಏಳು ಜನ ಗೆದ್ದಿದ್ರು – ನನ್ನ ಇಬ್ಬರು ಮೊಮ್ಮಕ್ಕಳು ಎಲೆಕ್ಷನ್‍ಗೆ ನಿಂತಿದ್ದು ತಪ್ಪಾ: ಎಚ್‍ಡಿಡಿ

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷ ಸಂಘಟನೆ ಮುಂದಾಗಿರುವ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಮಾವೇಶವನ್ನು ಇಂದು ನಡೆಸಿದರು. ಈ ವೇಳೆ ಮಾತನಾಡಿದ ಎಚ್‍ಡಿಡಿ ತಮಿಳುನಾಡಿನ ಕರುಣಾನಿಧಿ ಕುಟುಂಬದ ಏಳು ಜನ ಗೆದ್ದು ಬಂದಿದ್ದರು. ಆದರೆ ನನ್ನ ಇಬ್ಬರು ಮೊಮ್ಮಕ್ಕಳು ಚುನಾವಣೆಯಲ್ಲಿ ನಿಂತಿದ್ದರು ಎಂದು ಹೇಳಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಅವರು, ನನ್ನ ಜೀವನದ ಉದ್ದಕ್ಕೂ ರಾಜ್ಯದ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದು, ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಬಲಿಷ್ಟವಾಗಿದ್ದು. ರಾಜ್ಯದಲ್ಲೂ ಪಕ್ಷ ಸಂಘಟನೆಗೆ ನನ್ನ ಹೋರಾಟವೂ ಮುಂದುವರಿಯುತ್ತದೆ. ಆದರೆ ಕರ್ನಾಟಕದಲ್ಲಿ ಏನಾಗಿದೆ. ಕೃಷ್ಣ, ಕಾವೇರಿಗಾಗಿ ಹೋರಾಟ ಮಾಡಿದ್ದು, ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ಪ್ರಾದೇಶಿಕ ಪಕ್ಷದ ಜವಾಬ್ದಾರಿ ಎಲ್ಲರ ಮೇಲಿಯೂ ಇರುತ್ತೆ. ನಮ್ಮ ಮೇಲೆ ಯಾವುದೇ ಆಪಾದನೆ ಇದ್ದರೆ ತೋರಿಸಿ ಎಂದು ಇದೇ ವೇಳೆ ಮಾಧ್ಯಮಗಳಿಗೆ ಮನವಿ ಮಾಡಿದರು.

ಈ ಹಿಂದೆ ಪಕ್ಷದಿಂದ ಗೆದ್ದವರಿಗೆ ಕರೆದು ಸನ್ಮಾನ ಮಾಡಿದ್ದೇ. ಆದರೆ ಈಗ ಸೋತವರನ್ನ ಕರೆಯಬೇಕು ಎಂದು ಎಲ್ಲರನ್ನು ಕರೆದಿದ್ದೇನೆ. ನಾನು ಸೋತ ಅಭ್ಯರ್ಥಿ. ಹಾಗಾಗಿ ಸೋತವರನ್ನ ಈ ಸಭೆಗೆ ಕರೆದಿದ್ದೇನೆ. ನನಗೆ ಕಾರ್ಯಕರ್ತರೇ ಸ್ಫೂರ್ತಿಯಾಗಿದ್ದು, ಆದರೆ ಪಕ್ಷ ಎಲ್ಲಿ ಬೆಳೆಯುತ್ತೆ ಎಂದು ಕೆಲವರಿಗೆ ಅನ್ನಿಸುತ್ತದೆ. ಆದರೆ ಪಕ್ಷ ಕಟ್ಟಿ ಬೆಳೆಸಿದ ದೇವೇಗೌಡ ಸುಮ್ಮನೆ ಕೂರಲು ಸಾಧ್ಯವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯ ಗೆಲುವು ಸುಲಭ ಅಲ್ಲ. ಆದರೂ ಸ್ಥಳೀಯ ಸಂಸ್ಥೆಯಲ್ಲಿ ಸಾಕಷ್ಟು ಜನ ಗೆದ್ದಿದ್ದಾರೆ ಎಂದು ಕಾರ್ಯಕರ್ತರಿಗೆ ಸ್ಥೈರ್ಯ ತುಂಬಿದರು.

ಮೈತ್ರಿ ಸರ್ಕಾರ ಮುಂದುವರಿದು, ಕಾಂಗ್ರೆಸ್ – ಜೆಡಿಎಸ್ ಸೋದರ ಸಮಾನದಲ್ಲಿ ನಡೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರುತ್ತೆ. ಈ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕು. ಮೈತ್ರಿ ಸರ್ಕಾರದಲ್ಲಿ ವ್ಯತ್ಯಾಸಗಳಿರಬಹುದು, ಆದರೆ ಯಾರು ಪಕ್ಷ ಬಿಟ್ಟು ಹೋಗಿಲ್ಲ. ಒಂದು ವರ್ಷದ ಸಾಧನೆ ಕೇವಲ ಕುಮಾರಸ್ವಾಮಿ ಮಾತ್ರ ಮಾಡಿದ್ದಾರೆ ಎಂದು ನಾನು ಹೇಳಲ್ಲ. ಈ ಸಾಧನೆ ಎರಡು ಪಕ್ಷದವರು ಸೇರಿ ಮಾಡಿದ್ದಾರೆ. ಸದ್ಯ ಜೆಡಿಎಸ್ ನಲ್ಲಿ ಏನು ಗೊಂದಲ ಇಲ್ಲ. ಮುಂದಿನ ಚುನಾವಣೆ ನಾಲ್ಕು ವರ್ಷಕ್ಕೆ ಬಂದರು ಕೂಡ ಅಲ್ಲಿಯವರೆಗೂ ಜನರ ನಡುವೆ ಹೋಗಬೇಕು ಎಂದರು.

ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಮೆಚ್ಚಿಸಿ ಕೆಲಸ ಮಾಡುವುದು ಕಷ್ಟ. 20-20 ಸರ್ಕಾರದಲ್ಲಿ ಕುಮಾರಸ್ವಾಮಿಗೆ ಒಂದು ಗುಂಪು ಸಹಕಾರ ಕೊಡಲಿಲ್ಲ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಸರ್ಕಾರ ನಾಲ್ಕು ವರ್ಷ ಆನಂದವಾಗಿ ನಡೆಯಲಿ. ಇನ್ನು ನಾಲ್ಕು ವರ್ಷ ನಾನು ಕೆಲಸ ಮಾಡುತ್ತೇನೆ, ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳದೆ ಪಕ್ಷ ಕಟ್ಟುತ್ತೇನೆ. ಈ ಸೋಲು ಮುಂದಿನ ಗೆಲುವಿಗೆ ಸೋಪಾನ ಆಗುತ್ತೆ ಎಂದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *