ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

Public TV
1 Min Read

ಹಾವೇರಿ: ಕಳೆದ ನಾಲ್ಕು ತಿಂಗಳಿನಿಂದ ಮಹಿಳೆಯೊಬ್ಬಳು ವಾಮಾಚಾರಕ್ಕೆ ತತ್ತರಿಸಿ ಹೋಗಿದ್ದಾರೆ. ಮಹಿಳೆ ಬಾಯಿಂದ ಕೂದಲು, ಮಣ್ಣಿನ ಗೊಂಬೆಗಳು ಹಾಗೂ ಅನ್ನದ ಬುತ್ತಿ ಬೀಳುತ್ತಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ.

ಸುನಂದಾ ಗೋಂದ್ಕರ (45) ತೊಂದರೆ ಅನುಭವಿಸುತ್ತಿರುವ ಮಹಿಳೆ. ಸುನಂದಾ ಬಾಯಿಂದ ಪ್ರತಿನಿತ್ಯ ವಸ್ತುಗಳು ಬರುತ್ತಿವೆ. ಸುನಂದಾ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದ ನಿವಾಸಿವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿದ್ದಾಗ ಬಾಯಿಯಿಂದ ನಿಂಬೆಹಣ್ಣು, ಕಬ್ಬಿಣದ ಮೊಳೆ, ಕೂದಲು, ಮಣ್ಣಿನ ಗೊಂಬೆಗಳು ಪ್ರತಿನಿತ್ಯ ಬೀಳುತ್ತಿದ್ದವು. ಆಗ ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ತೋರಿಸಿದ್ದಾರೆ.

ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ನಾರ್ಮಲ್ ಎಂದು ಬಂದಿತ್ತು. ಏನೋ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಮತ್ತೆ ಮನೆಗೆ ಹೋದ ಮೇಲೆ ಬಾಯಿಯಿಂದ ವಸ್ತುಗಳು ಬರುತ್ತೆವೆ. ಇದರಿಂದ ಮಹಿಳೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೊನೆಗೆ ತೊಂದರೆ ನಿವಾರಣೆಗಾಗಿ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಿವಾಲಿಬಸವೇಶ್ವರ ಮಠದ ಮೂಕಪ್ಪ ಸ್ವಾಮೀಜಿಗಳ ಮೊರೆ ಬಂದಿದ್ದಾರೆ.

ಕಳೆದ ಏಳು ದಿನಗಳಿಂದ ಮಠದಲ್ಲಿ ಆಶ್ರಯ ಪಡೆದ ಮೇಲೆ ಮಹಿಳೆಗೆ ತೊಂದರೆ ಕಡಿಮೆಯಾಗುತ್ತಿದೆ. ಸದ್ಯ ಪ್ರತಿದಿನ ಮಠದಲ್ಲಿ ಒಂದು ಅಥವಾ ಎರಡು ಬಾರಿ ಬಾಯಿಯಿಂದ ಕೂದಲು ಬರುತ್ತಿವೆ. ಮಹಿಳೆ ಬಾಯಿಯಿಂದ ಬರುತ್ತಿರುವ ವಸ್ತುಗಳನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಯಾರೋ ವಾಮಾಚಾರ ಅಥವಾ ಬಾನಾಮತಿ ಮಾಡಿಸಿದ್ದಾರೆ. ಪತಿಯ ಮನೆಯವರು ವರದಕ್ಷಿಣೆಗಾಗಿ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *