ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ ಗ್ರಾಮಸ್ಥರು

Public TV
1 Min Read

ಹಾವೇರಿ: ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆ ಹಾವೇರಿ ಜನರು ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ್ದು ವಿಶೇಷವಾಗಿತ್ತು.

ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಮತ್ತು ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ನಿವಾಸಿಗಳು ಗ್ರಹಣ ಹಿಡಿದಾಗ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿಟ್ಟಿದ್ದಾರೆ. ಒನಕೆ ನಿಲ್ಲಿಸಿದ ನಂತರ ಗ್ರಹಣ ವೀಕ್ಷಣೆ ಮಾಡಿದ್ದಾರೆ.

ಕೇತುಗ್ರಸ್ಥ ಸೂರ್ಯಗಹ್ರಣ ಈಗಾಗಲೇ ಆರಂಭವಾಗಿದ್ದು, ಸೂರ್ಯನಲ್ಲಿ ಆಗುವ ಬದಲಾವಣೆಗಳನ್ನು ವೀಕ್ಷಿಸುವ ಕಾತುರದಲ್ಲಿ ಜನರು ಇದ್ದಾರೆ. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸೂರ್ಯಗ್ರಹಣದ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಉಡುಪಿ, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು, ಧಾರವಾಡ, ಮಂಡ್ಯ, ಕಾರವಾರ, ಶಿವಮೊಗ್ಗ, ಬೆಳಗಾವಿ, ಮೈಸೂರು ಇನ್ನೂ ಅನೇಕ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಸೂರ್ಯಗ್ರಹಣ ಗೋಚರವಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು ಸೂರ್ಯ ಗ್ರಹಣ ಸರಿಯಾಗಿ ಗೋಚರವಾಗುತ್ತಿಲ್ಲ. ಕೆಲವು ಭಾಗದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೇತುಗ್ರಸ್ಥ ಸೂರ್ಯಗ್ರಹಣ ಕಾಲ:
ಸೂರ್ಯಗ್ರಹಣ ಸ್ಪರ್ಶಕಾಲ – ಬೆಳಗ್ಗೆ 8:04 ಗಂಟೆ
ಸೂರ್ಯಗ್ರಹಣ ಮಧ್ಯಕಾಲ – ಬೆಳಗ್ಗೆ 9:26 ಗಂಟೆ
ಸೂರ್ಯಗ್ರಹಣ ಮೋಕ್ಷಕಾಲ – ಬೆಳಗ್ಗೆ 11:04 ಗಂಟೆ
ಗ್ರಹಣ ನಕ್ಷತ್ರ – ಮೂಲ
ಗ್ರಹಣ ಸಮಯ – 2 ಗಂಟೆ 59 ನಿಮಿಷ

Share This Article
Leave a Comment

Leave a Reply

Your email address will not be published. Required fields are marked *