ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

Public TV
1 Min Read

ಹಾವೇರಿ/ಧಾರವಾಡ: ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದಿದೆ.

ಫಕ್ಕೀರಪ್ಪ ಗೋಣೇರ(25) ಮೃತ ಯುವಕ. ಶರಣಪ್ಪ ಗೋಣೇರ (35) ಮತ್ತು ಮಾರುತಿ ವಾಲೀಕಾರ(25) ಎಂಬುವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಹಿರೇಕೆರೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮೀನಿನಲ್ಲಿರೋ ಗುಡಿಸಲಿನಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಂಸಬಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅದೇ ರೀತಿ ಧಾರವಾಡದಲ್ಲಿಯೂ ಸಹ ಗುಡುಗು ಮಿಶ್ರಿತ ಮಳೆ ಸಿಡಿಲಿನಿಂದ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಮೃತ ವ್ಯಕ್ತಿ ಮಲಕಪ್ಪ ಸೂರ್ಯವಂಶಿ(40) ಎಂದು ಗುರುತಿಸಲಾಗಿದೆ.

ಮೃತ ಮಲಕಪ್ಪ ಸೂರ್ಯವಂಶಿ ಅವರು ಧಾರವಾಡದ ನವಲೂರು ನಿವಾಸಿಯಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Share This Article
Leave a Comment

Leave a Reply

Your email address will not be published. Required fields are marked *