ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಇಂದು ಶಬರಿಮಲೆಗೆ

Public TV
0 Min Read

ಬೆಂಗಳೂರು: ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಸಂಜೆ ಶಬರಿಮಲೆಗೆ ತೆರಳಲಿದ್ದಾರೆ.

ಗುರುಸ್ವಾಮಿ ಶಿವರಾಮ್ ನೇತೃತ್ವದಲ್ಲಿ ಮನೆಯಲ್ಲಿ ಇರುಮುಡಿಪೂಜೆ ಮುಗಿಸಿ ಅನ್ನಸಂತರ್ಪಣೆ ಮಾಡಿ ಬಳಿಕ ಶಿವಣ್ಣ ಶಬರಿಮಲೆಗೆ ಹೊರಡಲಿದ್ದಾರೆ. ಕಳೆದ 9 ವರ್ಷಗಳಿಂದ ಶಬರಿಮಲೆಗೆ ಶಿವರಾಜ್‍ಕುಮಾರ್ ತೆರಳುತ್ತಿದ್ದಾರೆ.

ಈ ಬಾರಿ ಶಿವಣ್ಣ ಜೊತೆ ಸ್ನೇಹಿತರು, ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರು ಸೇರಿ ಒಟ್ಟು 45 ಮಂದಿ ಶಬರಿಮಲೆಗೆ ತೆರಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *