ಜನರ ಅಭಿಮಾನ ನೋಡಿದರೆ ಸಾಕಷ್ಟು ಸಂತೋಷವಾಗತ್ತಿದೆ: ಶಿವರಾಜ್ ಕುಮಾರ್

Public TV
1 Min Read

ಬೆಂಗಳೂರು: ಅಭಿಮಾನಿಗಳು ತುಂಬಾ ಚೆನ್ನಾಗಿ ರೆಸ್ಪಾನ್ಸ್ ಮಾಡಿದ್ದಾರೆ. ಜನರ ಅಭಿಮಾನವನ್ನು ನೋಡಿದರೆ ಸಾಕಷ್ಟು ಸಂತೋಷವಾಗತ್ತಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

ಮಾಗಡಿ ಮುಖ್ಯ ರಸ್ತೆಯ ಆಂಜನೇಯನ ಗುಡಿಗೆ ಭೇಟಿ ಬಳೀಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಹಲವು ದಿನಗಳ ಬಳಿಕ ಚಿತ್ರ ತೆರೆ ಕಂಡಿದೆ. ಬಹಳ ಸಂತೋಷವಾಗತ್ತಿದೆ. ನನ್ನ ಹಾಗೂ ಹರ್ಷ ಅವರ ಕಾಂಬಿನೇಷನಲ್ಲಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಜನರು ಸುರಕ್ಷಿತವಾಗಿ ಬಂದು ಸಿನೆಮಾ ನೋಡಲಿ. ಸಿನಿಮಾದಲ್ಲಿ ಓಳ್ಳೆ ಥೀಮ್ ಇದೆ, ಜನರು ಒಪ್ಪಿಕೊಂಡ್ರೇ ಸಿನಿಮಾ ಗೆದ್ದ ಹಾಗೆ ಎಂದರು. ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

ಎರಡು ಚಿತ್ರಮಂದಿರಗಳಿಗೆ ವಿಸಿಟ್ ಮಾಡಿದ ಶಿವಣ್ಣ ನಂತರ ಆಂಜನೇಯನ ಗುಡಿಗೆ ಭೇಟಿ ಕೊಟ್ಟರು. ಈ ವೇಳೆ ಭಜರಂಗಿ 2 ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಹನುಮನ ವೇಷದಲ್ಲಿ ಬಾಲಕರು ನಟನನ್ನು ಸ್ವಾಗತಿಸಿದರು. ಬಳಿಕ ಸೆಂಚುರಿ ಸ್ಟಾರ್ ಅವರು ದೇವರಿಗೆ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದರು. ಇದೇ ವೇಳೆ ಅಭಿಮಾನಿಗಳು ಶಿವಣ್ಣನಿಗೆ ಬೆಳ್ಳಿ ಗದೆ ಕೊಟ್ಟು ವಿಶ್ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *