ಇನ್ಮೇಲೆ ವಾರ್ನಿಂಗ್ ಇರಲ್ಲ, ಆ್ಯಕ್ಷನ್ ಅಷ್ಟೇ: ಹಾಸನ ಎಸ್‍ಪಿ

Public TV
1 Min Read

ಹಾಸನ: ಇನ್ನು ಮೇಲೆ ವಾರ್ನಿಂಗ್ ಇರಲ್ಲ. ಆಕ್ಷನ್ ಅಷ್ಟೇ ಇರುತ್ತೆ ಎಂದು ಕಫ್ರ್ಯೂ ಉಲ್ಲಂಘಿಸುವ ಮಂದಿಗೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ, ಎಸ್‍ಪಿ, ಜಿಪಂ ಸಿಇಒ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಎಷ್ಟೇ ಬುದ್ಧಿವಾದ ಹೇಳಿದರೂ ಪದೇ ಪದೇ ಅಂಗಡಿ ತೆಗೆಯುವವರು ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವವರ ಬಗ್ಗೆ ಮಾತನಾಡಿದ ಎಸ್‍ಪಿ ಶ್ರೀನಿವಾಸ್ ಗೌಡ, ಮೊದಲು ಎಚ್ಚರಿಕೆ ಕೊಡುವುದು ನಮ್ಮ ಕರ್ತವ್ಯ. ಈಗ ಎಚ್ಚರಿಕೆ ಕೊಟ್ಟಾಗಿದೆ. ಇನ್ನು ನಿಯಮ ಮೀರಿ ನಡೆದರೆ ಆಕ್ಷನ್ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ನಿಯಮ ಮೀರಿರುವ ಹೋಟೆಲ್, ಹೋಂಸ್ಟೇ ಮೇಲೆ ಈಗಾಗಲೇ ಮೂರು ಕೇಸ್ ದಾಖಲಾಗಿದೆ ಎಂದು ಕೂಡ ತಿಳಿದರು. ಈ ವೇಳೆ ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ ಯಾರಾದರೂ ವಿದೇಶದಿಂದ ಬಂದವರು ಮನೆಯಿಂದ ಹೊರಗೆ ಓಡಾಡುತ್ತಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಯಾವುದೇ ಕೊರೊನ ಪಾಸಿಟಿವ್ ಕೇಸ್ ಕಂಡು ಬಂದಿಲ್ಲ. ಎಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ರೋಗ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *