ಪುರುಷತ್ವ ಇಲ್ಲದವನಿಗೆ ಮಗಳು ಕೊಟ್ಟು ಕಳ್ಕೊಂಡ್ವಿ- ಹಾಸನದಲ್ಲಿ ನೊಂದ ಪೋಷಕರ ಪ್ರತಿಭಟನೆ

Public TV
1 Min Read

ಹಾಸನ: ಪುರುಷತ್ವವೇ ಇಲ್ಲದ ಹಾಸನದ ವ್ಯಕ್ತಿಯೊಬ್ಬ ಮದುವೆಯಾಗಿ 2 ವರ್ಷ ತುಂಬುವ ಮುನ್ನವೇ ಮೊದಲ ಪತ್ನಿಯ ಸಾವಿಗೆ ಕಾರಣವಾಗಿದ್ದಲ್ಲದೇ, ಈಗ ಮತ್ತೊಂದು ಮದುವೆಗೆ ಯತ್ನಿಸುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆದರೆ ಯಾರೊಬ್ಬರೂ ಈ ವಂಚಕನಿಗೆ ಹೆಣ್ಣು ಕೊಡಬೇಡಿ ಎಂದು ಮನವಿ ಮಾಡುತ್ತಿರುವ ಮೃತ ಹೆಣ್ಣು ಮಗಳ ಪೋಷಕರು, ಆತನ ಅಂದಕ್ಕೆ ಮಾರುಹೋಗಿ ನಮ್ಮಂತೆ ನಿಮ್ಮ ಹೆಣ್ಣು ಮಕ್ಕಳನ್ನೂ ಬಲಿ ಕೊಡಬೇಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.

ಹೊಳೆನರಸೀಪುರ ತಾಲೂಕು ಬಂಡಿಗನಹಳ್ಳಿಯ ಯೋಗೇಶ್-ಭಾರತಿ ಎಂಬವರ ಪುತ್ರಿ ಪೂಜಾಳನ್ನು ಹಾಲಿ ಬೆಂಗಳೂರಿನ ಕೋರವಂಗಲದಲ್ಲಿ ವಾಸವಾಗಿರುವ ಹೊಳೆನರಸೀಪುರ ತಾತನಹಳ್ಳಿಯ ಶಿವರಾಜ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. 2014 ಸೆಪ್ಟಂಬರ್ 29 ರಂದು ಹೊಳೆನರಸೀಪುರದಲ್ಲಿ ನಡೆದ ಮದುವೆಗೆ ಒಟ್ಟು 11 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿತ್ತು. ಶಿವರಾಜ್ ಮನೆಯವರದ್ದು ಪೊಲೀಸ್ ಕುಟುಂಬವಾಗಿದ್ದರಿಂದ ಭವಿಷ್ಯದಲ್ಲಿ ಮಗಳು ಚೆನ್ನಾಗಿರುತ್ತಾಳೆ ಅನ್ನೋ ಆಸೆಯಿಂದ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡಸೇ ಅಲ್ಲದ ಶಿವರಾಜ್, ಕಳೆದ ಜನವರಿ 8ರಂದು ಪತ್ನಿಯನ್ನು ಕತ್ತು ಹಿಸುಕಿ ಸಾಯಿಸಿ ನಂತರ ನೇಣುಹಾಕಿದ್ದ ಎಂಬುದು ಮೃತಳ ಪೋಷಕರ ಆರೋಪವಾಗಿದೆ.

ತನ್ನ ತಪ್ಪು ಮುಚ್ಚಿಕೊಳ್ಳಲು ನನ್ನ ಮಗಳನ್ನು ಬಲಿ ತೆಗೆದುಕೊಂಡವ ಇದೀಗ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಹೊಂಚು ಹಾಕುತ್ತಿದ್ದಾನೆ. ಯಾವುದೇ ಕಾರಣಕ್ಕೂ ಈತನ ಅಂದಕ್ಕೆ ಮಾರುಹೋಗಿ ಮೋಸ ಹೋಗಬೇಡಿ ಎಂದು ಮೃತಳ ಪೋಷಕರು ಕಣ್ಣೀರು ಹಾಕಿ ಮನವಿ ಮಾಡುತ್ತಿದ್ದಾರೆ.

https://www.youtube.com/watch?v=rK5l7i8CLMk

 

 

Share This Article
Leave a Comment

Leave a Reply

Your email address will not be published. Required fields are marked *