ದೇವೇಗೌಡ್ರು ಓದಿದ್ದ ಕಾಲೇಜ್ ಬಂದ್- ಸರ್ಕಾರದ ವಿರುದ್ಧ ದಳಪತಿಗಳು ಕಿಡಿ

Public TV
1 Min Read

ಹಾಸನ: ಮಾಜಿ ಪ್ರಧಾನಿ ವ್ಯಾಸಂಗ ಮಾಡಿದ್ದ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಸಲ್ಲದ ಕಾರಣ ನೀಡಿ ಕಾಲೇಜು ಮುಚ್ಚಲು ಮುಂದಾಗಿದ್ಯಂತೆ. ದ್ವೇಷ ರಾಜಕಾರಣ ಮಾಡಲ್ಲ ಅಂತ ಹೇಳಿದ ಸಿಎಂ, ಈಗ ದ್ವೇಷ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಾಸನ ಅಂದಾಕ್ಷಣ ನೆನಪಿಗೆ ಬರೋದು ಏಕಮಾತ್ರ ಕನ್ನಡಿಗ ಪ್ರಧಾನಿಯಾಗಿದ್ದ ದೇವೇಗೌಡರು. ಅಂತಹ ಮಾಜಿ ಪ್ರಧಾನಿಗಳು ಓದಿದ್ದ ಹಾಸನದ ಡಿಪ್ಲೊಮಾ ಕಾಲೇಜ್ ಈಗ ಬಂದ್ ಆಗ್ತಿದೆ. ಹಾಸನ ನಗರದ ಡೈರಿ ವೃತ್ತದಲ್ಲಿರುವ ಸುಮಾರು 50 ಎಕರೆ ಪ್ರದೇಶದ ಈ ಕಾಲೇಜನ್ನು 1948ರಲ್ಲಿ ನಿರ್ಮಿಸಲಾಗಿತ್ತು. ಆದರೆ ಇದೀಗ ಮೂಲಭೂತ ಸೌಕರ್ಯ ಇಲ್ಲ ಅಂತ ಬಿಜೆಪಿ ಸರ್ಕಾರ ಕಾಲೇಜನ್ನೇ ಬಂದ್ ಮಾಡ್ತಿದೆ. ಇದು ದ್ವೇಷ ರಾಜಕಾರಣ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.

1948ರಲ್ಲಿ ಈ ಕಾಲೇಜ್ ನಿರ್ಮಿಸಿದಾಗ ನಾಲ್ಕೈದು ಜಿಲ್ಲೆಗಳಿಗೆ ಇದೊಂದೇ ಡಿಪ್ಲೊಮಾ ಕಾಲೇಜ್ ಆಗಿತ್ತು. ದೇವೇಗೌಡರು 1951 ರಿಂದ 53ರವರೆಗೆ ಮೂರು ವರ್ಷ ಸಿವಿಲ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು. ಕಾಲೇಜ್ ಮುಚ್ಚದಂತೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ರಾಜ್ಯ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಕಾಲೇಜ್ ಮುಚ್ಚಿದ್ದೇ ಆದಲ್ಲಿ ಬೃಹತ್ ಹೋರಾಟ ಮಾಡೋದಾಗಿ ಜೆಡಿಎಸ್ ಸ್ಥಳೀಯ ನಾಯಕರು ಎಚ್ಚರಿಕೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ, ಶಾಲಾ-ಕಾಲೇಜ್‍ಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಗುಣಮಟ್ಟ ಸುಧಾರಿಸಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಬೆಳಕಾಗಬೇಕಿರೋ ಸರ್ಕಾರವೇ ಈಗ ಕಾಲೇಜ್ ಮುಚ್ಚಲು ಮುಂದಾಗ್ತಿರೋದು ಎಷ್ಟು ಸರಿ ಅನ್ನೋದು ವ್ಯಾಪಕ ಟೀಕೆಗೆ ಗುರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *