ಚಿಕಿತ್ಸೆ ನೀಡಲು 5 ಸಾವಿರ ಲಂಚ ಕೇಳಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ

Public TV
1 Min Read

ಹಾಸನ: ಚಿಕಿತ್ಸೆ ನೀಡಲು ಐದು ಸಾವಿರ ಲಂಚಕ್ಕೆ ಆಮಿಷವೊಡ್ಡಿದ್ದ ವೈದ್ಯನೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಹಾಸನದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯ ಡಾ.ರಾಜಶೇಖರ್ ಸಿಕ್ಕಿ ಬಿದ್ದ ವೈದ್ಯಾಧಿಕಾರಿ. ಮಹಿಳೆಗೆ ಅಳವಡಿಸಿದ್ದ ಗರ್ಭ ನಿರೋಧಕ ಸಾಧನ ತೆಗೆಯಲು ಐದು ಸಾವಿರ ಲಂಚ ಕೇಳಿದ್ದ ವೈದ್ಯ, ಆಸ್ಪತ್ರೆ ಆವರಣದಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾನೆ.

ಮೂಡಿಗೆರೆ ತಾಲೂಕಿನ ಮಹಿಳೆಯೊಬ್ಬರ ಗರ್ಭ ಸುರಕ್ಷತಾ ಕವಚ ತೆಗೆಯಲು ಲಂಚ ಕೇಳಿದ್ದರು. ಎಸಿಬಿ ಡಿವೈಎಸ್ಪಿ ಪೂರ್ಣಚಂದ್ರ ನೇತೃತ್ವದಲ್ಲಿ ದಾಳಿ ಮಾಡಿದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದ ವೈದ್ಯನನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *