ಪ್ರವಾಸಿಗರ ಹಾಟ್‌ಸ್ಪಾಟ್ ಬಲಮುರಿ ಡೆತ್ ಸ್ಪಾಟ್ ಆಯ್ತಾ? – ಒಂದೂವರೆ ವರ್ಷದಲ್ಲಿ 20ಕ್ಕೂ ಅಧಿಕ ಮಂದಿ ಸಾವು

Public TV
1 Min Read

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು (Tourists) ಹರಿದು ಬರುತ್ತಾರೆ. ಹೀಗಾಗಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಬಲಮುರಿ (Balamuri) ಇದೀಗ ಸಾವಿನ ಕೂಪವಾಗಿ ಬದಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬಲಮುರಿಯಲ್ಲಿ ಕಾವೇರಿ ನದಿ (Cauvery River) ಅಪಾಯ ಮಟ್ಟದಲ್ಲಿ ಹರಿಯುವ ವೇಳೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಏರುತ್ತದೆ. ಇದೇ ಕಾವೇರಿ ಶಾಂತವಾಗಿ ಹರಿವಾಗ ಪ್ರವಾಸಿಗರಿಗೆ ಇಲ್ಲಿ ಏಂಜಾಯ್ ಮಾಡಲು ಅನುಮತಿ ನೀಡುತ್ತೆ. ಸದ್ಯ ಕಾವೇರಿ ಕಾವೇರಿ ನದಿ ಶಾಂತವಾಗಿ ಹರಿಯುತ್ತಿರುವ ಹಿನ್ನೆಲೆ ಪ್ರವಾಸಿಗರಿ ಅನುಮತಿ ನೀಡಿದೆ. ಆದರೆ ಪ್ರವಾಸಿಗರು ಏಂಜಾಯ್ ಮಾಡುವ ವೇಳೆ ಮೈಮರೆತ ವೇಳೆ ಸಾವು ನೋವುಗಳು ಸಹ ಇದೀಗ ಹೆಚ್ಚಾಗುತ್ತಿವೆ. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುಳಿಯದ ಮಳೆ – ಕೆಆರ್‌ಎಸ್ ನೀರಿನ ಮಟ್ಟ 89 ಅಡಿಗೆ ಕುಸಿತ

ಸದ್ಯ ಈ ಬಲಮುರಿಯಲ್ಲಿ 5 ತಿಂಗಳಿನಲ್ಲಿ ಈಜಲು ಹೋದ ಪ್ರವಾಸಿಗರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಒಂದೂವರೆ ವರ್ಷದ ದತ್ತಾಂಶ ನೋಡುವುದಾದರೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಸಹ ಜಿಲ್ಲಾಡಳಿತ ಪೊಲೀಸ್ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇದನ್ನೂ ಓದಿ: ಮಂಡ್ಯ | ಬೈಕ್ ಅಡ್ಡಗಟ್ಟಿದ ಪೊಲೀಸ್ರು – ಆಯತಪ್ಪಿ ಬಿದ್ದು ತಾಯಿ ಮಡಿಲಲ್ಲೇ ಪ್ರಾಣಬಿಟ್ಟ ಮಗು

Share This Article