ಮಗ ಮನೆಯಿಂದ ಹೊರಗೆ ಬಂದಿಲ್ಲ: ಹಾರ್ದಿಕ್ ಪಾಂಡ್ಯ ತಂದೆ

Public TV
1 Min Read

ಮುಂಬೈ: ಆಸ್ಟ್ರೇಲಿಯಾ ಏಕದಿನ ಪಂದ್ಯಗಳಿಂದ ಕೈ ಬಿಟ್ಟ ಬಳಿಕ ತಮ್ಮ ಮಗ ಮನೆಯಿಂದ ಹೊರ ಬರಲು ಇಷ್ಟ ಪಡುತ್ತಿಲ್ಲ. ಅಲ್ಲದೇ ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಂದೆ ಹಿಮಾಂಶು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ತನ್ನ ಹೇಳಿಕೆ ಕುರಿತು ಪಶ್ಚಾತ್ತಾಪ ಪಡುತ್ತಿದ್ದಾನೆ. ಹಬ್ಬದ ಸಮಯದಲ್ಲಿ ಹಾರ್ದಿಕ್ ಗಾಳಿ ಪಟ ಹಾರಿಸಲು ಇಷ್ಟ ಪಡುತ್ತಿದ್ದ, ಆದರೆ ಆಸ್ಟ್ರೇಲಿಯಾದಿಂದ ಬಂದ ಮೇಲೆ ಬೇಸರದಲ್ಲಿದ್ದಾನೆ. ಮೊನ್ನೆಯ ಪಂದ್ಯವನ್ನು ಟಿವಿಯಲ್ಲಿ ನೋಡಿದ್ದಾನೆ ಎಂದು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ನಾವು ಕಾರ್ಯಕ್ರಮದಲ್ಲಿ ಮಾತನಾಡಿದ ವಿಚಾರದ ಬಗ್ಗೆ ಆತನೊಂದಿಗೆ ಚರ್ಚೆ ನಡೆಸಿಲ್ಲ. ಈಗಾಗಲೇ ಕ್ಷಮೆ ಕೋರಿರುವ ಪಾಂಡ್ಯ, ಮುಂದೇ ಇಂತಹ ತಪ್ಪನ್ನು ಮಾಡಲ್ಲ ಎಂದು ತಿಳಿಸಿದ್ದಾರೆ ಎಂದರು.

ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಕ್ಷೇಪಾರ್ಹವಾಗಿ ಮಾತನಾಡಿದ್ದ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಬಳಿಕ ಬಿಸಿಸಿಐ ಎದುರು ಕ್ಷಮೆ ಕೋರಿದ್ದರು. ಆದರೆ ಆಟಗಾರರ ವರ್ತನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾದ ಬಿಸಿಸಿಐ ವಿಚಾರಣೆಗೆ ಮುಂದಾಗಿದೆ. ಪರಿಣಾಮ ಆಸೀಸ್ ಸರಣಿಯಿಂದ ಕೈ ಬಿಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *