ಆರ್-ಕೆ ಡಿಸಿಸಿ ಬ್ಯಾಂಕ್ ನೌಕರರಿಗೆ ಕಿರುಕುಳ? – ಸಕಾರಣ ನೀಡದೇ 30 ನೌಕರರ ವೇತನ ಸ್ಥಗಿತ

Public TV
2 Min Read

– ವಾರ್ಷಿಕ 6 ಕೋಟಿ ರೂ. ಲಾಭ ಹೊಂದಿರೋ ಹಣಕಾಸು ಸಂಸ್ಥೆ

ಕೊಪ್ಪಳ: ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಲ್ಲಿ ಇದೂ ಒಂದು. ವಾರ್ಷಿಕ ಬರೋಬ್ಬರಿ 6 ಕೋಟಿ ನಿವ್ವಳ ಲಾಭ ಹೊಂದಿರುವ ಹೆಗ್ಗಳಿಕೆಯೂ ಇದೆ. ಆದರೆ, ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಷಪೂರ್ತಿ ವೇತನ ನೀಡಿಲ್ಲ.

ರಾಯಚೂರು- ಕೊಪ್ಪಳ ಕೇಂದ್ರ ಸಹಕಾರಿ ಬ್ಯಾಂಕ್ (R-K DCC) ಆಡಳಿತ ಮಂಡಳಿ ಸರ್ವಾಧಿಕಾರಿ ಧೋರಣೆಗೆ ನೌಕರರು ಕಂಗಾಲಾಗಿದ್ದಾರೆ. ತಮ್ಮ ಅಣತಿಯಂತೆ ನಡೆಯದ ನೌಕರರನ್ನು ಇಲ್ಲ ಸಲ್ಲದ ನೆಪ ಮುಂದಿಟ್ಟು, ಮಾನಸಿಕ ಹಿಂಸೆ ನೀಡಲಾಗುತ್ತದೆ. ತಪ್ಪು ಮಾಡಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳುವ ಬದಲಿಗೆ ವರ್ಷಗಟ್ಟಲೆ ವೇತನ (Salary) ನೀಡದೇ ಕಿರುಕುಳ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದ್ದು, ಆಡಳಿತ ಮಂಡಳಿ ನಡೆಯಿಂದ ಬೇಸತ್ತ ನೌಕರನೊಬ್ಬ ನ್ಯಾಯ ಕೊಡಿಸಲು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

ವೇತನ ಸ್ಥಗಿತ:
ರಾಯಚೂರಿನಲ್ಲಿ (Raichur) ಕೇಂದ್ರ ಕಚೇರಿ ಹೊಂದಿರುವ ಆರ್-ಕೆ ಡಿಸಿಸಿ ಬ್ಯಾಂಕ್, ಕೊಪ್ಪಳ- ರಾಯಚೂರು ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. ಎರಡೂ ಜಿಲ್ಲೆ ಸೇರಿ ಒಟ್ಟು 27 ಶಾಖೆ ಹೊಂದಿದ್ದು, 168 ಖಾಯಂ ನೌಕರರು ಮತ್ತು 22 ತಾತ್ಕಾಲಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಶಿವಪುತ್ರಪ್ಪ ಹಡಪದ ಎಂಬವರಿಗೆ ಕಳೆದ 17 ತಿಂಗಳಿನಿಂದ ವೇತನ ನೀಡಿಲ್ಲ. ಶಿವಪುತ್ರಪ್ಪ ಏನು ತಪ್ಪು ಮಾಡಿದ್ದಾನೆ ಎಂಬುದನ್ನೂ ಆಡಳಿತ ಮಂಡಳಿ ಆತನಿಗೆ ಹೇಳಿಲ್ಲ. ಇದರಿಂದ ಬೇಸತ್ತ ಶಿವಪುತ್ರಪ್ಪ ನ್ಯಾಯಕ್ಕಾಗಿ ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಪರಾರಿ

ಶಿವಪುತ್ರಪ್ಪ ಅಷ್ಟೇ ಅಲ್ಲದೇ ಸುಮಾರು 8 ಮಹಿಳಾ ಸಿಬ್ಬಂದಿ ಸೇರಿ ಸುಮಾರು 30ಕ್ಕೂ ಹೆಚ್ಚು ಬ್ಯಾಂಕ್ ನೌಕರರಿಗೆ ಇದೇ ರೀತಿ ವೇತನ ಸ್ಥಗಿತ ಮಾಡಿದ್ದಾರೆ. ಅಧ್ಯಕ್ಷರು ಮತ್ತು ಸಿಇಒ (CEO) ಅಣತಿಯಂತೆ ನಡೆದುಕೊಂಡಿಲ್ಲ. ಅವರು ಹೇಳಿದವರಿಗೆ ಕೇಳಿದಷ್ಟು ಸಾಲ ಕೊಟ್ಟಿಲ್ಲ ಎಂಬ ಕಾರಣಕ್ಕೆ ಇಲ್ಲಸಲ್ಲದ ಕಾರಣ ಮುಂದಿಟ್ಟು, ವೇತನ ಸ್ಥಗಿತಗೊಳಿದ್ದಾರೆ ಎಂಬುದು ನೌಕರರ ಆರೋಪ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ನೊಂದ ನೌಕರ ಶಿವಪುತ್ರಪ್ಪ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ

ಏನು ಹೇಳುತ್ತೆ ನಿಯಮ?
ಸಾಮಾನ್ಯವಾಗಿ ಸರ್ಕಾರಿ- ಅರೆ ಸರ್ಕಾರಿ ಅಥವಾ ಖಾಸಗಿ ವಲಯದ ನೌಕರರು ಕರ್ತವ್ಯ ಲೋಪ ಎಸಗಿದಾಗ, ಕೂಡಲೇ ನೋಟಿಸ್ ನೀಡಬೇಕು. ಅಗತ್ಯ ಇದ್ದರೆ ಅಮಾನತು ಮಾಡಿ, ಅವರ ಮೇಲಿನ ಆರೋಪಗಳ ಬಗ್ಗೆ ತನಿಖೆ ಮಾಡಬೇಕು. ಮುಂದಿನ 6 ತಿಂಗಳಿನಲ್ಲಿ ವಿಚಾರಣೆ ಮುಗಿಸಿ, ತಕ್ಕ ಶಿಕ್ಷೆ ನೀಡಬೇಕು. ಇಲ್ಲವೇ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಆದರೆ, ಯಾವುದೇ ಕಾರಣಕ್ಕೂ ವರ್ಷಪೂರ್ತಿ ವೇತನ ಸ್ಥಗಿತಗೊಳಿಸಿ, ಕೆಲಸ ಮಾಡಿಸಿಕೊಳ್ಳಲು ಅವಕಾಶ ಇಲ್ಲ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಮೋದಿ ಮಧ್ಯಪ್ರವೇಶವಾಗಬೇಕು – ಸಿಎಂ ಮನವಿಗೆ ಬಿಜೆಪಿ ಸಂಸದರ ಆಕ್ಷೇಪ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್