ಲಂಗು ಲಗಾಮು ಇಲ್ಲದೆ ಮಾತನಾಡಿ ಚುನಾವಣೆ ಗೆಲ್ಲುತ್ತೇವೆ ಎಂಬುದು ಭ್ರಮೆ: ರಂಭಾಪುರಿ ಶ್ರೀ

Public TV
1 Min Read

-ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಬೈದಾಟಕ್ಕೆ ಅಸಮಾಧಾನ

ಯಾದಗಿರಿ: ಎಲ್ಲಾ ರಾಜಕೀಯ ನಾಯಕರು ಪ್ರಚಾರದ ಬರದಲ್ಲಿ ಮಾಡುತ್ತಿರುವ ಪದ ಬಳಕೆ ಯಾವುದಕ್ಕೂ ಪ್ರಯೋಜನ ಇಲ್ಲ. ಎಲ್ಲಾ ರಾಜಕೀಯ ಮುಖಂಡರು ವಿಷಯವನ್ನು ಆಧರಿಸಿ ಟೀಕೆ ಟಿಪ್ಪಣಿ ಮಾಡಿದ್ರೆ ಜನರು ಬೆಲೆ ಕೊಡುತ್ತಾರೆ ಎಂದು ಉಪಚುನಾವಣೆ ವೇಳೆ ರಾಜಕೀಯ ನಾಯಕರ ಕೆಸರೆರಚಾಟ ನಡೆಸುತ್ತಿದ್ದಾರೆ ಈ ಮೂಲಕ ಜಯಗಳಿಸುತ್ತೇವೆ ಎಂಬುದು ಭ್ರಮೆ ಎಂದು ರಂಭಾಪುರಿ ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಯಾವ ಪ್ರಣಾಳಿಕೆಯು ಇಲ್ಲದೆ, ವಿಷಯವೂ ಇಲ್ಲದೆ ಧರ್ಮದ ಲಾಂಚಣ ಹಿಡಿಯಲಾಗುತ್ತಿದೆ, ಧರ್ಮದ ಆಚರಣೆ ಇಟ್ಟುಕೊಂಡು ಲಂಗು ಲಗಾಮು ಇಲ್ಲದೆ ಮಾತನಾಡುವದು ನೋಡುಗರಿಗೆ ಮುಜುಗರ ಉಂಟು ಮಾಡಿದೆ, ಇಂತಹ ಮಾತುಗಳಿಂದ ಗೆಲ್ಲುತ್ತೇವೆ ಎಂಬುದು ಭ್ರಮೆ ಇದು ಸಂಪೂರ್ಣ ಸುಳ್ಳು ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಹಿರಂಗ ಪ್ರಚಾರ ಅಂತ್ಯ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಮನೆ-ಮನೆ ಕ್ಯಾಂಪೇನ್

ಯಾವುದೆ ರಾಜಕಾರಣಿ ಇರಲಿ, ಧರ್ಮದ ವ್ಯಕ್ತಿ ಇರಲಿ ಭಾರತೀಯ ಸಂಸ್ಕೃತಿಯನ್ನು ಸಮಾನವಾಗಿ ಕಾಣುವ ಭಾವನೆ ಇರಬೇಕು, ವ್ಯಕ್ತಿಯನ್ನು ಕುರಿತು ಟೀಕೆ ಟಿಪ್ಪಣಿ ಮಾಡಬಾರದು, ಅವರು ಆಡುವಂತಹ ಮಾತಿನಲ್ಲಿ ಸುಧಾರಣೆ ಆದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಆಗುತ್ತದೆ ಎಂದರು. ಇದನ್ನೂ ಓದಿ: ಹಾನಗಲ್‍ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್‍ಡಿಕೆ ಆರೋಪ

Share This Article
Leave a Comment

Leave a Reply

Your email address will not be published. Required fields are marked *