ತಮಿಳುನಾಡಿನ ಪಂಚಾಂಗ ಬಂದಿದೆ, ನಮ್ದು ಬಂದ್ಮೇಲೆ ನೋಡಿ ಹೇಳ್ತೀನಿ: ರೇವಣ್ಣ ವ್ಯಂಗ್ಯ

Public TV
1 Min Read

ಹಾಸನ: ಆಪರೇಷನ್ ಕಮಲದ ಬಗ್ಗೆ ಯಾವುದೇ ಟೆನ್ಷನ್ ಇಲ್ಲ. ನಿನ್ನೆ ತಮಿಳುನಾಡು ಪಂಚಾಂಗ ಬಂದಿದೆ. ನಮ್ಮ ಪಂಚಾಂಗ ಬರಬೇಕಲ್ಲ. ಅದನ್ನು ನೋಡಿ ಮುಂದೆ ಎನಾಗುತ್ತದೆ ಎನ್ನುವುದನ್ನು ಹೇಳ್ತೀನಿ ಅಂತ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿದರೆ ನಮಗೇನು ಟೆನ್ಷನ್ ಇಲ್ಲ. ನಾವು ಆರಾಮವಾಗಿದ್ದೇವೆ. ಏನಾದ್ರು ಹೊಲ ಮನೆ ಕಳೆದುಕೊಳ್ಳೊದಾದ್ರೆ ಟೆನ್ಷನ್ ತಗೋಬೇಕು. ನಮ್ಮದು ಯಾವುದೂ ಹೋಗಿಲ್ಲ ಎಂದರು.

ನಾವು ಯಾವಾಗಲೂ ಕೂಲ್, ಸಿಟ್ಟು ಇಟ್ಟುಕೊಂಡು ನಾವೇನು ಮಾಡ್ಬೇಕು. ನಿನ್ನೆ ಬಂದಿದ್ದು ತಮಿಳುನಾಡು ಪಂಚಾಂಗ. ನಮ್ಮ ಪಂಚಾಂಗ ಯುಗಾದಿಗೆ ಬರುತ್ತೆ. ಎರಡನ್ನು ನೋಡಿ ಮುಂದಿನ ಭವಿಷ್ಯ ಹೇಳ್ತೀನಿ. ಪಂಚಾಂಗ ಬಂದಮೇಲೆ ಮಾತನಾಡೋಣ. ಈಗ ಬೇಡ ಅಂತ ರೇವಣ್ಣ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *