ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1, ಇದಕ್ಕೆ ಪ್ರಶಸ್ತಿ ಕೊಡಬೇಕು : ಆಂಜನೇಯ

Public TV
1 Min Read

ಕೊಪ್ಪಳ: ಪ್ರಪಂಚದಲ್ಲಿ ಭಾರತಕ್ಕೆ ಬಹುಮಾನ ಸಿಗಬೇಕಾದರೆ ಅದು ಮಕ್ಕಳು ಹುಟ್ಟಿಸುವುದಲ್ಲಿ ಮಾತ್ರ. ಮಕ್ಕಳನ್ನು ಹುಟ್ಟಿಸುವುದರಲ್ಲಿ ಭಾರತವು ನಂಬರ್ ಒನ್ ಆಗಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.

ಜಿಲ್ಲೆಯ ಕುಷ್ಟಗಿ ಪಟ್ಟಣದ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸಮಾನತೆ ಇಲ್ಲ, ಜಾತಿ ವ್ಯವಸ್ಥೆ ಹೋಗಿಲ್ಲ. ಬಡವ ಶ್ರೀಮಂತ ಎಂಬ ಬೇದ ಹೋಗಿಲ್ಲ. ಆದರೆ ನಾವು ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ನಂಬರ್ ಎಂದು ಹೇಳಿದರು.

ನಾನು ಸಹ ಇದಕ್ಕಾಗಿಯೇ ಎರಡು ಮಕ್ಕಳನ್ನು ಮಾತ್ರ ಪಡೆದಿದ್ದೇನೆ. ನೀವು ಕೂಡ ಮಕ್ಕಳನ್ನು ಹುಟ್ಟಿಸುವುದರಲ್ಲಿ ಬ್ರೇಕ್ ಹಾಕಿ ಎಂದು ನವ ವಧು-ವರರಿಗೆ ಕಿವಿ ಮಾತು ಹೇಳಿದರು.

ದೇವರನ್ನು ಪೂಜಿಸ ಬೇಡಿ: ಇದೇ ವೇಳೆ ಸಮಾರಂಭದಲ್ಲಿದವರಿಗೆ ದೇವರಿಗೆ ಹೆಚ್ಚು ಪೂಜೆ ಮಾಡಬೇಡಿ. ಪೂಜೆ ಮಾಡಿಯೇ ನಾವು ಅರ್ಧ ಹಾಳಾಗಿದ್ದೇವೆ. ದೇವರು ಎಲ್ಲಾ ನಿಮಗೇ ಕೊಟ್ಟಿದ್ದಾರೆ. ನೀವು ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ಮಾತಿಗೆ ಕಟ್ಟು ಬಿದ್ದು ದುಡಿಯಿರಿ. ಕಾಯಕದಲ್ಲಿ ದೇವರನ್ನು ಕಾಣಿರಿ ಎಂದು ಹೇಳಿದರು.

ಜಾತ್ರೆ ಮಾಡಿ ಹಾಳು: ನಮ್ಮ ಜನಾಂಗದವರು 8 ರಿಂದ 10 ದಿನ ಕೋಣ, ಕುರಿ ಬಲಿ ಕೊಟ್ಟು, ಸಾಲ ಮಾಡಿ ಹಲವು ದೇವರ ಹೆಸರುಗಳಲ್ಲಿ ಜಾತ್ರೆ ಮಾಡಿ ಹಾಳಾಗಿ ಹೋಗುತ್ತಿದ್ದೀರಾ. ಸದ್ಯ ಅದಕ್ಕೆಲ್ಲಾ ಬ್ರೇಕ್ ಹಾಕಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *