ನೀರು ಕೇಳಿದ್ದ ಯುವಕನನ್ನ 5ನೇ ಮಹಡಿಯಿಂದ ತಳ್ಳಿದ ಪಿಜಿ ಓನರ್!

Public TV
1 Min Read

ನವದೆಹಲಿ: ಪಿಜಿಯಲ್ಲಿ ಸಮರ್ಪಕ ನೀರು ಮತ್ತು ವಿದ್ಯುತ್ ಒದಗಿಸುವಂತ ಕೇಳಿದ್ದ ಯುವಕನನ್ನು ಪಿಜಿ ಮಾಲಕ ಮತ್ತು ಆತನ ಮಗ ಕಟ್ಟಡದ 5ನೇ ಮಹಡಿಯಿಂದ ತಳ್ಳಿ ಕೊಲೆಗೈದಿರುವ ಘಟನೆ ದೆಹಲಿಯ ಗುರ್‍ಗಾಂವ್‍ನ ಡಿಎಲ್‍ಎಫ್ ಫೇಸ್-3ರಲ್ಲಿ ಗುರುವಾರ ನಡೆದಿದೆ.

ಮೂಲತಃ ಉತ್ತರಾಖಂಡ ರಾಜ್ಯದ ನೈನಿತಾಲನ ನಿವಾಸಿ ರಮೇಶ್ ಸಿಂಗ್ ಬಿಷ್ತ್ ಕೊಲೆಯಾದ ಯುವಕ. ಸತ್ಬೀರ್ ಸಿಂಗ್ ಮತ್ತು ಆತನ ಮಗ ಇಬ್ಬರೂ ಸೇರಿ ರಮೇಶ್ 5ನೇ ಫ್ಲೋರ್‍ನಿಂದ ತಳ್ಳಿ ಕೊಲೆಗೈದಿದ್ದಾರೆ.

ರಮೇಶ್ 15 ದಿನಗಳ ಹಿಂದೆ ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಹೋಟೆಲ್ ಮ್ಯಾನೇಜೆಮೆಂಟ್ ಟ್ರೇನಿಂಗ್ ಪಡೆಯಲು ನಗರಕ್ಕೆ ಆಗಮಿಸಿದ್ದನು. ಈ ವೇಳೆ ಡಿಎಲ್‍ಎಫ್ ಪೇಸ್ 3ರ ಪಿಜಿಯೊಂದರಲ್ಲಿ ತಂಗಿದ್ದನು.

ಡಿಎಲ್‍ಎಫ್ ಫೇಸ್-3ರಲ್ಲಿ ಒಟ್ಟು 200 ಜನ ವಿದ್ಯಾರ್ಥಿಗಳು ವಾಸವಾಗಿದ್ದು, 5ನೇ ಫ್ಲೋರ್‍ನಲ್ಲಿ ರಮೇಶ್ ಸೇರಿದಂತೆ ಒಟ್ಟು 20 ಯವಕರು ವಾಸವಾಗಿದ್ದರು. ಕಳೆದ ನಾಲ್ಕೈದು ದಿನಗಳಿಂದ ಫ್ಲ್ಯಾಟ್‍ನಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆ ಅಸಮರ್ಪಕವಾಗಿತ್ತು. ಇದ್ರಿಂದಾಗಿ 5ನೇ ಫ್ಲೋರ್‍ನ ಕೆಲ ಯುವಕರು ರೂಂ ಬದಲಾಯಿಸಿದ್ದರು.

ಪಿಜಿ ಮಾಲಕ ಸತ್ಬೀರ್ ಸಿಂಗ್ ತನ್ನ ಕುಟುಂದೊಂದಿಗೆ 1ನೇ ಫ್ಲೋರ್‍ನಲ್ಲಿ ವಾಸವಾಗಿದ್ದ. ಗುರುವಾರ ರಾತ್ರಿ 12 ಗಂಟೆಯ ವೇಳೆಯಲ್ಲಿ ರಮೇಶ್ ನೀರು ಮತ್ತು ವಿದ್ಯುತ್ ಸಮರ್ಪಕವಾಗಿ ಒದಗಿಸಿ ಎಂದು ಸತ್ಬೀರ್ ನೊಂದಿಗೆ ಗಲಾಟೆಗೆ ಮಾಡಿಕೊಂಡಿದ್ದಾನೆ. ಗಲಾಟೆಯಲ್ಲಿ ಸತ್ಬೀರ್ ತನ್ನ ಮಗನನೊಂದಿಗೆ ಕೋಲಿನಿಂದ ರಮೇಶ್ ಮೇಲೆ ಹಲ್ಲೆ ನಡೆಸಿ, 5ನೇ ಫ್ಲೋರ್‍ನಿಂದ ತಳ್ಳಿದ್ದಾನೆ,

ಕೂಡಲೇ ರಮೇಶನನ್ನು ಆತನ ಗೆಳಯರು ಸ್ಥಳೀಯ ನೀಲಕಾಂತ್ ಆಸ್ಪತ್ರೆಗೆ ದಾಖಲಿಸಿದ್ರೂ, ರಮೇಶ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸತ್ಬೀರ್ ಸಿಂಗ್ ಮತ್ತು ಆತನ ಮಗನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *