ಅದೃಷ್ಟದ ಗೂಬೆ ಅಂತಾ ಜನರನ್ನು ವಂಚಿಸುತ್ತಿದ್ದ ಖತರ್‍ನಾಕ್ ಗ್ಯಾಂಗ್ ಅಂದರ್

Public TV
1 Min Read

ಕಲಬುರಗಿ: ಅದೃಷ್ಟದ ಗೂಬೆಗಳು ಅಂತಾ ಹೇಳಿ ಜನರಿಗೆ ವಂಚಿಸುತ್ತಿದ್ದ ಖತರ್‍ನಾಕ್ ಗ್ಯಾಂಗ್ ನ್ನು ಕಲಬುರಗಿ ಜಿಲ್ಲೆ ಸ್ಟೇಡಂ ಬಳಿ ಪೊಲೀಸರು ಬಂಧಿಸಿದ್ದಾರೆ.

ದೀಪಾವಳಿ ನರಕ ಚತುರ್ದಶಿ ಹಿನ್ನೆಲೆಯಲ್ಲಿ ತಂಡವೊಂದು ಮಾಟ ಮಂತ್ರ ವಶೀಕರಣಕ್ಕಾಗಿ ಗೂಬೆಗಳನ್ನು ಜನರಿಗೆ ಮಾರಾಟ ಮಾಡುತ್ತಿತ್ತು. ವಂಚಕರು ಅದೃಷ್ಟದ ಗೂಬೆಗಳು ಎಂದು ಜನರನ್ನು ಯಾಮಾರಿಸಿ ಜನರಿಂದ ಹಣವನ್ನು ಪಡೆಯುತ್ತಿದ್ದರು. ಜಿಲ್ಲಾ ಸ್ಟೇಡಂ ಬಳಿ ಮಂಗಳವಾರ ರಾತ್ರಿ ಇಂಡಿಕಾ ಕಾರಿನಲ್ಲಿ ಗೂಬೆಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ವಂಚಕರ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

ಬಂಧಿತರಿಂದ ಎರಡು ಗೂಬೆಗಳನ್ನು ಹಾಗೂ ಕಾರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಗೂಬೆಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *