ಕೆಪಿ ಅಗ್ರಹಾರದಲ್ಲಿ ರೌಡಿಗಳ ಪುಂಡಾಟ- ನಡುರಾತ್ರಿಯಲ್ಲಿ ಬೆಚ್ಚಿಬಿತ್ತು ರಾಜ್ಯ ರಾಜಧಾನಿ

Public TV
1 Min Read

ಬೆಂಗಳೂರು: ನಗರದಲ್ಲಿ ರೌಡಿಗಳ ಹಾವಳಿ ದಿನೇ ದಿನೇ ಹೆಚ್ಚಾಗ್ತಾನೆ ಇದೆ. ಪೊಲೀಸ್ರ ಭಯನೂ ಇಲ್ಲದೆ ಇರೋ ಪರಿಸ್ಥತಿ ಉಂಟಾಗಿದೆ. ಇದಕ್ಕೆ ಗುರುವಾರ ನಡೆದ ಘಟನೆ ಪುಷ್ಠಿ ನೀಡುತ್ತಿದೆ.

ನಿನ್ನೆ ರಾತ್ರಿ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ರೌಡಿಗಳಿಂದ ದಾಂಧಲೆ ನೆಡೆದಿದೆ. ಮೂರು ಬೈಕ್‍ಗಳಲ್ಲಿ ಬಂದ ಆರು ಜನರ ತಂಡ ಲಾಂಗ್ ಮಚ್ಚುಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಸಂಜು ಅನ್ನೋ ರೌಡಿ ಶೀಟರ್ ಮನೆಗೆ ನುಗ್ಗಿ ರೌಡಿ ಜಯಂತ್ ಆಂಡ್ ಟೀಂ ಗಲಾಟೆ ಮಾಡಿದ್ದಾರೆ. ವಿಜಯನಗರ ಕಾಫಿ ಡೇ ನಲ್ಲಿ ಮಹೇಶ್ ಅನ್ನೋ ವ್ಯಕ್ತಿಯನ್ನು ಸಂಜು ಮರ್ಡರ್ ಆಗಿದ್ದ. ಈ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಸಂಜು, 20ದಿನಗಳ ಹಿಂದೆ ಸಂಜು ಜೈಲ್‍ನಿಂದ ಹೊರಗೆ ಬಂದಿದ್ದ. ಮಹೇಶ್ ಕೊಲೆ ಮಾಡಿದ ಸೇಡು ತೀರಿಸಲು ಸಂಜು ಸಿಗದ ಕಾರಣ ಅಕ್ಕಪಕ್ಕದವರ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ವರುಣ್ ಎಂಬವರ ಮೇಲೆ ಹಲ್ಲೆಯಾಗಿದ್ದು, ಸದ್ಯ ವರಣ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂದ ಕೆಪಿ ಅಗ್ರಹಾರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *