– ಜಿಬಿಎ ಜಾರಿಗೆ ಸರ್ಕಾರ ಉತ್ಸಾಹ, ಕಾನೂನು ಸಮರಕ್ಕೆ ಕೇಸರಿ ತಯಾರಿ
ಬೆಂಗಳೂರು: ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಅಸ್ತಿತ್ವಕ್ಕೆ ಬಂದಿದೆ. ಬಿಬಿಪಿಎಂಪಿ (BBMP) ಇತಿಹಾಸ ಪುಟ ಸೇರಿದೆ. ಪ್ರತಿಪಕ್ಷಗಳ ಪ್ರಬಲ ವಿರೋಧದ ಮಧ್ಯೆಯೂ ಬಿಬಿಎಂಪಿಯನ್ನು ಕನಿಷ್ಟ 3 ಭಾಗವಾಗಿ ವಿಭಜಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ನಡೆಯನ್ನು ವಿಪಕ್ಷ ಬಿಜೆಪಿ (BJP) ತೀವ್ರವಾಗಿ ಟೀಕಿಸಿದ್ದು, ಜಿಬಿಎ ವಿರುದ್ಧ ಕಾನೂನು ಸಮರಕ್ಕೆ ಸಿದ್ಧವಾಗುತ್ತಿದೆ.
ಇಂದಿನಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಳೆದ ಅಧಿವೇಶನದಲ್ಲಿ ಕಾಂಗ್ರೆಸ್-ವಿಪಕ್ಷಗಳ ಜಟಾಪಟಿಗೆ ವೇದಿಕೆಯಾಗಿದ್ದ ಜಿಬಿಎ ಕೊನೆಗೂ ಜಾರಿಯಾಗಿದೆ. ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡಿದ್ದು, ಕನಿಷ್ಟ 3 ಪಾಲಿಕೆ ರಚಿಸಿ ಅದರಡಿ ಬೆಂಗಳೂರು ಆಡಳಿತ ನಡೆಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ದೇಶದ ವಿರುದ್ಧ ಮಾತಾಡಿದ್ರೆ ಜನ ನಿಮ್ಮ ನಾಲಿಗೆ ಇಲ್ಲದಂತೆ ಮಾಡ್ಬಹುದು – ʻಕೈʼ ನಾಯಕರಿಗೆ ಛಲವಾದಿ ಎಚ್ಚರಿಕೆ
ಈ ಸಂಬಂಧ ಇಂದು ಬೆಂಗಳೂರಿನಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯನ್ನು ಸ್ವಾಗತಿಸಿದ್ದಾರೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಟ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಇಂದಿನಿಂದ ಜಾರಿ – ಸಿದ್ದರಾಮಯ್ಯ
ಇನ್ನು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಬಿಎಂಪಿಗೆ 110 ಹಳ್ಳಿಗಳು ಸೇರಿ ವ್ಯಾಪ್ತಿ ಜಾಸ್ತಿ ಆಗಿದೆ. ಜನಸಂಖ್ಯೆಯೂ ಜಾಸ್ತಿ ಆಗಿದೆ. ಹೊಸ ಹೊಸ ಅಪಾರ್ಟ್ಮೆಂಟ್, ಲೇಔಟ್ ಆಗುತ್ತಿವೆ. ಹೀಗಾಗಿ ಗ್ರೇಟರ್ ಬೆಂಗಳೂರು ಮಾಡಿದ್ದೇವೆ. 3 ಪಾಲಿಕೆ ಆಗಬೇಕು ಅನ್ನೋದು ನನ್ನ ಅನಿಸಿಕೆ. ಬಿಜೆಪಿ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ಸುಮ್ಮನೆ ಆರೋಪ ಮಾಡುತ್ತಾರೆ. ಬಿಜೆಪಿ, ಜೆಡಿಎಸ್ ಅವಧಿಯಲ್ಲಿ ಜಿಲ್ಲೆಗಳು ಹೆಚ್ಚಾದವು. ಅವರು ಯಾಕೆ ಮಾಡಿದ್ರು? ಆಡಳಿತಾತ್ಮಕ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಮಾಡಿದ್ದೇವೆ. ಬಿಜೆಪಿ ಅವರು ಮಾಡಲ್ಲ, ಮಾಡೋಕು ಬಿಡಲ್ಲ. ಬಿಬಿಎಂಪಿ ಚುನಾವಣೆ ಈ ವರ್ಷದ ಒಳಗೆ ಮಾಡುತ್ತೇವೆ. ಚುನಾವಣೆ ಆಗಬೇಕು. ಪ್ರತಿನಿಧಿಗಳು ಬೇಕು. ಚುನಾವಣೆ ಮುಂದೂಡಿದ್ದು ಬಿಜೆಪಿ ಅವರು. ನಾವು ಚುನಾವಣೆ ಮುಂದೂಡಲ್ಲ, ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಉಡುಪಿ: ಬಾವಿಗೆ ಹಾರಿದ ತಂದೆ, ರಕ್ಷಣೆಗೆ ಹೋದ ಪುತ್ರ – ಇಬ್ಬರೂ ದುರಂತ ಅಂತ್ಯ
ಇತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಬೆಂಗಳೂರಿನಲ್ಲಿ ಮಾತಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕೆಂಪೇಗೌಡರ ಬೆಂಗಳೂರು ಒಡೆಯಲು ಕಾಂಗ್ರೆಸ್ ಸಂಚು ಮಾಡಿದೆ. ಬಿಬಿಎಂಪಿ ಚುನಾವಣೆ ಮುಂದೂಡಲು ನಾಟಕ ಆಡುತ್ತಿದ್ದಾರೆ. ಅವರು ಎಷ್ಟು ಅವಧಿ ಅಧಿಕಾರದಲ್ಲಿ ಇರುತ್ತಾರೋ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಈ ಕಾಯ್ದೆ ರದ್ದಾಗಲಿದೆ. ಸದ್ಯ ಜಿಬಿಎ ವಿರುದ್ಧ ಬಿಜೆಪಿ ಕಾನೂನು ಸಮರ ನಡೆಸಲಿದೆ ಎಂದರು. ಇದನ್ನೂ ಓದಿ: ತ್ರಾಲ್ ಸೇನಾ ಕಾರ್ಯಾಚರಣೆ – ಎನ್ಕೌಂಟರ್ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ
ಶಾಸಕ ಅಶ್ವರ್ಥ ನಾರಾಯಣ್ ಮಾತನಾಡಿ, ಜಿಬಿಎ ಬೆಂಗಳೂರು ಅಭಿವೃದ್ಧಿಗೆ ವಿರುದ್ಧವಾಗಿದೆ. ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಇನ್ನು ಜೆಡಿಎಸ್ ಸಹ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಯೋಗ್ಯರು ಹೆಸರನ್ನಷ್ಟೇ ಬದಲಾಯಿಸುತ್ತಾರೆ, ಮೇರು ನಾಯಕರು ಇತಿಹಾಸ ಸೃಷ್ಟಿಸ್ತಾರೆ ಎಂದು ಎಕ್ಸ್ನಲ್ಲಿ ಜೆಡಿಎಸ್ ಕಿಡಿ ಕಾರಿದೆ. ಇದನ್ನೂ ಓದಿ: ಮೋದಿಗೆ ಟಕ್ಕರ್ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್ಫೀಲ್ಡ್ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್ ಪ್ರಧಾನಿ ಸಂವಾದ
ಸದ್ಯ ಜಿಬಿಎ ರಚನೆ ವಿಚಾರ ಕಾಂಗ್ರೆಸ್ ಮತ್ತು ವಿಪಕ್ಷಗಳ ನಡುವೆ ಪ್ರತಿಷ್ಠೆ ಸಮರಕ್ಕೆ ವೇದಿಕೆಯಾಗಿದೆ. ಮುಂದೆ ನ್ಯಾಯಾಲಯದ ಅಂಗಳದಲ್ಲಿ ಸಮರ ನಡೆಯಲಿದ್ದು, ಜಿಬಿಎ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: Ramanagara | ಹತ್ಯೆಯಾದ ಅಪ್ರಾಪ್ತ ಬಾಲಕಿ ಮನೆಗೆ ಸಂಸದ ಡಾ.ಮಂಜುನಾಥ್ ಭೇಟಿ, ಸಾಂತ್ವನ