ಆರು ಸಂಘಟನೆ, ಒಬ್ಬರೇ ಅಧ್ಯಕ್ಷ – ಸರ್ಕಾರದಿಂದ ಅನುದಾನದ ಮೇಲೆ ಅನುದಾನ

Public TV
2 Min Read

– ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಗೆ ಸಂಘಟನೆಗಳ ಆಕ್ರೋಶ

ಬೆಂಗಳೂರು: ಕನ್ನಡ ಅಭಿವೃದ್ಧಿಗಾಗಿ ಅನೇಕ ಸಂಘ ಸಂಸ್ಥೆಗಳು, ಕನ್ನಡ ಸಂಘಟನೆಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಲೇ ಇವೆ. ಇದಕ್ಕಾಗಿ ಇಲಾಖೆ ಪ್ರತೀ ವರ್ಷ ವಿವಿಧ ಸಂಘ ಸಂಸ್ಥೆಗಳಿಗೆ ಅನುದಾನ ನೀಡುತ್ತದೆ. ಆದರೆ ಅನುದಾನ ನೀಡಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪವೊಂದು ಕೇಳಿಬಂದಿದೆ.

ಡಾ. ಶರಣ ಬಸವ ಗದ್ದುಗೆ ಎಂಬ ವ್ಯಕ್ತಿ ಅಧ್ಯಕ್ಷರಾಗಿರುವ ಆರು ಸಂಘಟನೆಗಳಿಗೂ ಅನುದಾನ ನೀಡಲಾಗುತ್ತಿದೆ ಅಂತ ದೂರು ನೀಡಲಾಗಿದೆ. ಈ ಪ್ರಕರಣ ಉಳಿದ ಕನ್ನಡ ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ದೂರಿನಲ್ಲಿ ನೀಡಿರುವ ಪ್ರಕಾರ ಡಾ. ಶರಣ ಬಸವ ಗದ್ದುಗೆ ಅಧ್ಯಕ್ಷರಾಗಿರುವ ಸಂಘಟನೆಗಳ ವಿವರ ಹೀಗಿದೆ.
1. ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ
2. ಶ್ರೀ ಚರ ಬಸವೇಶ್ವರ ಸಂಗೀತ ಸೇವಾ ಸಮಿತಿ
3. ಕರ್ನಾಟಕ ಸಂಸ್ಕೃತಿ ಹಾಗೂ ಭಾಷಾ ಅಭಿವೃದ್ಧಿ ಸಂಸ್ಥೆ
4. ಸರಗನಾಡು ಸೇವಾ ಪ್ರತಿಷ್ಠಾನ
5. ಶೃಷ್ಟಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ
6. ಸರಗನಾಡು ಕಲಾ ವೇದಿಕೆ

ಪ್ರತಿ ವರ್ಷ ಏನಿಲ್ಲವೆಂದ್ರೂ ಒಂದು ಸಂಘಟನೆಗೆ ಕನಿಷ್ಟ 1 ಲಕ್ಷದಿಂದ 5 ಲಕ್ಷದವರೆಗೆ ಅನುದಾನ ಸಿಗತ್ತದೆ. ಈ ಆರು ಸಂಘಟನೆಗಳಿಗೂ ಪ್ರತೀ ವರ್ಷ ಅನುದಾನ ನೀಡಲಾಗುತ್ತಿದೆ. ಇದಕ್ಕೆ ಇತರ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬೇರೆ ಸಂಘಟನೆಗಳಿಗೆ ಸಿಗದ ಅನುದಾನ ಈ ಸಂಘಟನೆಗಳಿಗೆ ಹೇಗೆ ಸಿಕ್ತಿದೆ..? ಅಧಿಕಾರಿಗಳು ಶಾಮೀಲಾಗಿ ಅನುದಾನ ಬಿಡುಗಡೆಯಾಗುವಂತೆ ನೋಡಿಕೊಳ್ತಿದ್ದಾರೆ ಅಂತ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಕಿಡಿಕಾರಿದ್ದಾರೆ.

ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಾ. ಶರಣ ಬಸವ ಗದ್ದುಗೆ, ಮೊದ ಮೊದಲು ನಂದು ಕೇವಲ ಒಂದೇ ಸಂಘಟನೆ ಎಂದ್ರು. ನಂತರ ಒಂದಕ್ಕೆ ಸಂಸ್ಥಾಪಕ ಅಧ್ಯಕ್ಷ, ಇನ್ನೊಂದಕ್ಕೆ ಅಧ್ಯಕ್ಷನಾಗಿದ್ದೇನೆ ಅಂದ್ರು ಬಳಿಕ ಮೂರು ಸಂಘಟನೆಗಳಿಗೆ ಅಧಕ್ಷನಾಗಿರಬಹುದು. ಆದ್ರೆ ಸದಸ್ಯರುಗಳು ಬೇರೆ ಬೇರೆ ಇದ್ದಾರೆ ಎಂದು ಸಮಜಾಯಿಷಿ ನೀಡಿದರು.

ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಗಮನಕ್ಕೆ ತರಲಾಗಿದ್ದು, ನೋಟಿಸ್ ನೀಡಿ ಕ್ರಮಕೈಗೊಳ್ಳುವ ಭರವಸೆ ನೀಡದ್ದಾರೆ. ಸಚಿವೆ ಜಯಮಾಲಾ ಮೇಡಂ ಇಂಥ ಅಕ್ರಮಗಳಿಗೆ ಕಡಿವಾಣ ಹಾಕಿದ್ರೆ ಜನರ ತೆರಿಗೆ ಹಣವನ್ನ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *