ಒಂದು ತಿಂಗಳ ಶಿಶುವನ್ನು ಕೊಂದು ಮಂಚದ ಕೆಳಗೆ ಬಚ್ಚಿಟ್ಟಿದ್ದಳು ಅಜ್ಜಿ

Public TV
1 Min Read

-ಮೊಮ್ಮಗನನ್ನು ಕೊಂದಿದ್ದು ಯಾಕೆ? ಬೆಚ್ಚಿ ಬೀಳಿಸುತ್ತೆ ರಾಕ್ಷಸಿ ಅಜ್ಜಿಯ ಉತ್ತರ

ಬೆಂಗಳೂರು: ನಾಪತ್ತೆಯಾಗಿದ್ದ ಒಂದು ತಿಂಗಳ ಹಸುಗೂಸೊಂದು ಮಂಚದ ಕೆಳಗೆ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಡಿಸೆಂಬರ್ 21ರ ರಾತ್ರಿ ನಗರದ ನೀಲಸಂದ್ರದಲ್ಲಿ ಇಡೀ ಮಾನವ ಕುಲವೇ ತಲೆತಗ್ಗಿಸುವ ಹೀನ ಕೃತ್ಯ ನಡೆದುಹೋಗಿತ್ತು. ಕೇವಲ 29 ದಿನಗಳ ಹಸುಗೂಸನ್ನು ನರ ರೂಪದ ರಾಕ್ಷಸರು ಉಸಿರು ಗಟ್ಟಿಸಿ ಕೊಂದು ಹಾಕಿದ್ದರು. ಅಲ್ಲದೇ ಕೊಲೆ ಮಾಡಿ ಟವಲ್ ನಲ್ಲಿ ಆ ಮುದ್ದು ಮಗುವಿನ ಶವ ಸುತ್ತಿ, ಮಂಚದ ಕೆಳಗೆಬಿಟ್ಟು ಹೋಗಿದ್ದರು. ಸದ್ಯ ಈ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ಪ್ರಾಣ ತೆಗೆದಿದ್ದು ಬೇರೆ ಯಾರು ಅಲ್ಲ ಆ ಮಗುವಿನ ಅಜ್ಜಿಯೇ ಮೊಮ್ಮಗನ ಕೊಂದು ಹಾಕಿರುವ ವಿಷಯ ಬೆಳಕಿಗೆ ಬಂದಿದೆ.

ಅಜ್ಜಿಯೇ ತನ್ನ ಸ್ವಂತ ಮೊಮ್ಮಗುವಿನ ಕೊಂದು ಹಾಕಿದ್ದಾಳೆ. ಮಗ ಕಾರ್ತಿಕ್ ಪತ್ನಿಗೆ ಎರಡು ಅವಳಿ ಗಂಡು ಮಕ್ಕಳಾಗಿತ್ತು. ಒಂದು ಮಗುವಿಗೆ ಹುಟ್ಟಿದಾಗಿನಿಂದಲೂ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿತ್ತು. ಕಾರ್ತಿಕ್ ಕೂಡ ಇತ್ತೀಚೆಗೆ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದನು.

ಪ್ರತಿ ಬಾರಿ ಮಗುವಿನ ಚಿಕಿತ್ಸೆಗೆ ಹೆಚ್ಚಿನದಾಗಿ ಹಣ ಖರ್ಚಾಗುತ್ತಿದೆ. ಹೇಗಿದ್ದರೂ ಒಂದು ಗಂಡು ಮಗು ಇದೆ. ಇನ್ನೊಂದು ಮಗುವಿನ ಅನಾರೋಗ್ಯದಿಂದ ಆರ್ಥಿಕವಾಗಿಯೂ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಹಸುಗೂಸಿನ ಅಜ್ಜಿ ವಿಜಯಲಕ್ಷ್ಮಿಯೇ ಉಸಿರುಗಟ್ಟಿಸಿ ಕೊಲೆ ಗೈದಿದ್ದಾಳೆ ಎನ್ನುವುದು ವಿಚಾರಣೆಯ ವೇಳೆಯಲ್ಲಿ ತಿಳಿದು ಬಂದಿದೆ.

ಸದ್ಯ ಅಶೋಕ್ ನಗರ ಪೊಲೀಸರು ಆರೋಪಿ ಅಜ್ಜಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *