ಕೊರೊನಾ ನಿಯಂತ್ರಣಕ್ಕೆ ಬೆಂಗಳೂರಿಗೆ ದಂಡಾಧಿಕಾರಿಗಳ ನೇಮಕ

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿಯ 8 ವಲಯಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಕ ಮಾಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ದಂಡಾಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಾರೆ. 1973 ಪಕ್ರಿಯೆ ಸಂಹಿತೆ, ಕೇಂದ್ರ ಅಧಿನಿಯಮ 2/1974 ಸೆಕ್ಷನ್ 21ರಡಿ ಅಧಿಕಾರ ಚಲಾಯಿಸಿ ಈ ಅಧಿಕಾರಿಗಳ ನೇಮಕ ಮಾಡಲಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಅಡ್ಡಿ ಪಡಿಸುವವರಿಗೆ ಶಿಕ್ಷಿಸುವ ಅಧಿಕಾರವನ್ನು ಈ ದಂಡಾಧಿಕಾರಿಗಳಿಗೆ ನೀಡಲಾಗಿದೆ. ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ.

ಜಂಟಿ ಆಯುಕ್ತರಾದ ಕೆ.ಆರ್ ಪಲ್ಲವಿ, ವೀರಭದ್ರಸ್ವಾಮಿ, ಜಗದೀಶ್ ಎಂ. ರಾಮಕೃಷ್ಣ, ವೆಂಕಟಾಚಲಪತಿ, ಎನ್. ಚಿದಾನಂದ, ಡಾ.ಅಶೋಕ್, ನರಸಿಂಹಮೂರ್ತಿ, ಕೆಐಎಡಿಬಿ ಅಧಿಕಾರಿ ವಿಜಯಕುಮಾರ್ ಅವರಿಗೆ ವಿಶೇಷ ದಂಡಾಧಿಕಾರಿ ಸ್ಥಾನಮಾನ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *