ಸರ್ಕಾರ ಮುಸ್ಲಿಮರ ಗುಲಾಮ; ಸುಳ್ಳುಗಾರ ಜಮೀರ್ ಮಾತನ್ನು ಸಿಎಂ ಕೇಳಬಾರದು: ಈಶ್ವರಪ್ಪ

Public TV
1 Min Read

– 15% ಮೀಸಲಾತಿ ವಾಪಸ್ ಪಡೆಯಲಿ ಎಂದು ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರ (Congress) ಮುಸ್ಲಿಮರ ಗುಲಾಮ ಸರ್ಕಾರ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದರು.

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ 15% ಮೀಸಲಾತಿ ವಿಚಾರ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ (Zameer Ahmed) ಹೆಚ್‌ಡಿಕೆ ಅವಧಿಯ ಉಪಸಂಪುಟ ಸಮಿತಿ ನೆಪ ಕೊಟ್ಟು ತಪ್ಪಿಸಿಕೊಳ್ಳಲು ಆಗಲ್ಲ. ಅಂಥವು ನೂರು ಉಪಸಂಪುಟ ಸಮಿತಿಗಳಾಗುತ್ತವೆ. ಸುಳ್ಳು ಹೇಳಿ ಜಮೀರ್ ದಾರಿ ತಪ್ಪಿಸಬಾರದು. ಜಮೀರ್ ಅಹ್ಮದ್ ದೊಡ್ಡ ಸುಳ್ಳುಗಾರ. ಸಿದ್ದರಾಮಯ್ಯಗೂ ಸುಳ್ಳು ಹೇಳಿ ಅನುಕೂಲ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಜಮೀರ್ ಅಹ್ಮದ್ ಬಗ್ಗೆ ಹುಷಾರಾಗಿರಬೇಕು. ಸಿದ್ದರಾಮಯ್ಯ (Siddaramaiah) ಹಿಂದುಳಿದವರು ಹಾಗೂ ದಲಿತರಿಗೆ ಅನ್ಯಾಯ ಆಗಲು ಬಿಡಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸದ್ಯಕ್ಕೆ ನಾನು ಬಿಜೆಪಿಗೆ ಮರಳುವುದಿಲ್ಲ: ಈಶ್ವರಪ್ಪ

ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ 15% ಮೀಸಲಾತಿಗೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ. ಹಿಂದುಳಿದವರು ದಲಿತರಿಗೆ ಅನ್ಯಾಯ ಆಗಿದೆ. ಅಹಿಂದ ಹೆಸರೇಳಿಕೊಂಡು ಮೇಲೆ ಬಂದ ಸಿದ್ದರಾಮಯ್ಯ ಈಗ ಹಿಂದ ಮರೆತು ಕೇವಲ ಅ ಅ ಅ ಅಂತಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೆಲ್ಲ ಬೇಕೋ ಎಲ್ಲ ಮಾಡುತ್ತಿದ್ದಾರೆ, ಇದು ದುರಾದೃಷ್ಟಕರ. 15% ಮೀಸಲಾತಿ ಕೊಡಲು ನಾವು ಬಿಡಲ್ಲ, ಹೋರಾಟ ಮಾಡುತ್ತೇವೆ. ಬರೀ ಮುಸಲ್ಮಾನರ ಕಡೆ ಸರ್ಕಾರ ತಿರುಗಿದರೆ ಭಾರೀ ಪೆಟ್ಟು ಖಚಿತ. ಮುಸ್ಲಿಮರನ್ನು ತೃಪ್ತಿ ಪಡಿಸುವ ಕೆಲಸ ಯಾರೂ ಒಪ್ಪಲ್ಲ. ಇದನ್ನು ರಾಜ್ಯಪಾಲರ ಒಪ್ಪಿಗೆಗೆ ಕಳಿಸಿದರೆ ಸಹಿ ಹಾಕಬಾರದು. ಈ ನಿರ್ಣಯವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತನಿಖೆ ಏನಾಯ್ತು – ಪಾದಯಾತ್ರೆ ನೆನಪಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ ಪಾಟೀಲ್

Share This Article