ಹುಣಸೂರಿನ ಬಾಹುಬಲಿಗೆ ವೈಭವದ ಮಜ್ಜನ

Public TV
1 Min Read

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿರುವ ಬಾಹುಬಲಿಗೆ 69ನೇ ಮಸ್ತಕಾಭಿಷೇಕ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಮಸ್ತಕಾಭಿಷೇಕಕ್ಕೆ ದೇವೇಂದ್ರ ಭಟ್ಟಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದು, ವೈರಾಗ್ಯ ಮೂರ್ತಿ ಮಹಾ ಮಜ್ಜನದಲ್ಲಿ ಮಿಂದೆದ್ದಿದೆ. ನೀರು, ಶ್ರೀಗಂಧ, ಅರಿಶಿಣ, ಕ್ಷೀರ, ಕಬ್ಬಿನ ಹಾಲು, ಕೇಸರಿ, ಅಷ್ಠಗಂಧ, ಚಂದನ, ಕುಂಕುಮ ಸೇರಿದಂತೆ ವಿವಿಧ ದ್ರವ್ಯಗಳಿಂದ ಬಾಹುಬಲಿ ಪ್ರತಿಮೆಗೆ ಅಭಿಷೇಕ ಮಾಡಲಾಯಿತು.

1949ರಲ್ಲಿ ಮೊದಲ ಮಸ್ತಕಾಭಿಷೇಕ ನಡೆದಿತ್ತು. ಮೊದಲ ಮಸ್ತಕಾಭಿಷೇಕಕ್ಕೆ ಜಯಚಾಮರಾಜ ಒಡೆಯರ್ ಸಾಕ್ಷಿಯಾಗಿದ್ದರು. ಬಾಹುಬಲಿ ಸ್ಥಳದಲ್ಲಿ 80 ಮೆಟ್ಟಿಲನ್ನು ಒಡೆಯರ್ ನಿರ್ಮಿಸಿದ್ದರು. ಭಾನುವಾರ ನಡೆದ ಮಸ್ತಕಾಭಿಷೇಕ ಕಾರ್ಯಕ್ಕೆ ಎಲ್ಲಾ ಜನಪ್ರತಿನಿಧಿಗಳು ಗೈರಾಗಿದ್ದರು.

ಬಾಹುಬಲಿ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡುವಾಗ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಅಭಿಷೇಕವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *