ಜೂ.3ರಂದು ಅಯೋಧ್ಯಾ ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ

Public TV
1 Min Read

ಲಕ್ನೋ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಮತ್ತೊಂದು ಕ್ಷಣಕ್ಕೆ ಸಜ್ಜಾಗಿದೆ. 2ನೇ ಬಾರಿ ಪ್ರಾಣ ಪ್ರತಿಷ್ಠೆಗೆ ಮುನ್ನ ಬಂಗಾರದ ಗುಮ್ಮಟ (Gold Plated Shikhara) ಉದ್ಘಾಟನೆ ಆಗಲಿದೆ.

ಗರ್ಭಗುಡಿಯ ಮೇಲೆ ಇರುವ ಬಂಗಾರದ ಶಿಖರವು ಪಾವಿತ್ರ್ಯತೆ, ಪ್ರಗತಿ ಮತ್ತು ಭಕ್ತಿಯ ಸಂಕೇತವಾಗಿದೆ. ಕಿಮೀಗಳ ದೂರಕ್ಕೆ ಗೋಚರಿಸ್ತಿರುವ ಈ ನಯನಮನೋಹರ ಗುಮ್ಮಟವು ಭಕ್ತರ ಕಣ್ಮನ ತಣಿಸುತ್ತಿದೆ. ಭಕ್ತಿ-ಭಾವವನ್ನು ಇಮ್ಮಡಿಗೊಳಿಸುತ್ತಿದೆ. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

ಅಲ್ಲದೇ ಮಂಗಳವಾರದಿಂದ 3 ದಿನ 2ನೇ ಬಾರಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಜೊತೆಗೆ ಮೊದಲ ಮಹಡಿಯಲ್ಲಿ ಇತರೆ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಜೊತೆಗೆ ʻರಾಮ ದರ್ಬಾರ್ʼ ಕೂಡ ನಡೆಯಲಿದೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಯ 3 ರಾಜ್ಯಗಳಲ್ಲಿದ್ದ ಆಸ್ತಿ ಮೇಲೆ ಸಿಬಿಐ ದಾಳಿ – 1 ಕೋಟಿ ನಗದು, 3.5 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಪತ್ತೆ

ಈಗಾಗಲೇ ಸಾವಿರಾರು ಭಕ್ತರು ಅಯೋಧ್ಯೆಯತ್ತ ಮುಖಮಾಡಿದ್ದಾರೆ. ಈ ಮಧ್ಯೆ, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ತಂದೆ ಎಲಾನ್‌ ಮಸ್ಕ್ ಭಾರತಕ್ಕೆ ಬಂದಿದ್ದು, ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ:  ಪಂಜಾಬ್‌ ವಿರುದ್ಧ ಫೈನಲ್‌ ಮ್ಯಾಚ್‌ – ಆರ್‌ಸಿಬಿ ಫ್ಯಾನ್ಸ್‌ಗೆ 1 ರೂ.ಗೆ ಆಫರ್‌ ಕೊಟ್ಟ ಸ್ನೂಕರ್‌ ಕ್ಲಬ್

Share This Article