ಅಣ್ಣನ ಹುಟ್ಟುಹಬ್ಬಕ್ಕೆ ಚಿನ್ನದ ಅಭಿಷೇಕ : ಬೆಂಗಳೂರಿನಲ್ಲಿ ರಜನಿಕಾಂತ್

Public TV
1 Min Read

ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕೆಲ ದಿನಗಳಿಂದ ಬೆಂಗಳೂರಿನಲ್ಲಿ (Bangalore) ಬೀಡು ಬಿಟ್ಟಿದ್ದಾರೆ. ಮೊನ್ನೆಯಷ್ಟೇ ಅವರು ಚಿಕ್ಕಬಳ್ಳಾಪುರ ಸಮೀಪದ ಆದಿಯೋಗಿ ಪ್ರತಿಮೆಗೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದರು. ಮೊನ್ನೆಯಷ್ಟೇ ರವಿಶಂಕರ್ ಗುರುಜಿ ಆಶ್ರಮಕ್ಕೂ ಹೋಗಿದ್ದರು. ಅಲ್ಲಿ ಶಿವರಾತ್ರಿ ಆಚರಣೆ ಮಾಡಿದ್ದರು. ನಿನ್ನೆ ಬೆಂಗಳೂರಿನಲ್ಲೇ ಇರುವ ಅಣ್ಣನ ಹುಟ್ಟುಹಬ್ಬದಲ್ಲಿ ರಜನಿ ಪಾಲ್ಗೊಂಡಿದ್ದಾರೆ.

ರಜನಿಕಾಂತ್ ಅವರ ಪ್ರೀತಿಯ ಸಹೋದರ ಸತ್ಯನಾರಾಯಣ್ (Satyanarayan Gaikwad ) ಬೆಂಗಳೂರಿನಲ್ಲೇ ವಾಸವಿದ್ದಾರೆ. ಅವರೀಗ 80ರ ಹುಟ್ಟುಹಬ್ಬದ (Birthday) ಸಂಭ್ರಮ. ಅಲ್ಲದೇ ಸತ್ಯನಾರಾಯಣ ಅವರ ಪುತ್ರನಿಗೂ ಅದೇ ದಿನ 60ರ ಸಂಭ್ರಮ. ಈ ಇಬ್ಬರ ಹುಟ್ಟುಹಬ್ಬವನ್ನು ರಜನಿಕಾಂತ್ ವಿಶೇಷವಾಗಿ ಆಚರಿಸಿದ್ದಾರೆ. ಅಂದು ಅಣ್ಣನ ಮೇಲೆ ಬಂಗಾರದ ಸುರಿಮಳೆಗೈದಿದ್ದಾರೆ. ಈ ವಿಶೇಷ ಸಂಭ್ರಮವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇವತ್ತು ರಜನಿಕಾಂತ್ ಈ ಮಟ್ಟಕ್ಕೆ ಬೆಳೆಯಲು ಸಹೋದರ ಸತ್ಯನಾರಾಯಣ್ ಗಾಯಕವಾಡ ಕಾರಣವಂತೆ. ಹಾಗಾಗಿ ಸಹೋದರನನ್ನು ಅವರು ಚಿನ್ನದ ಮನುಷ್ಯ ಎಂದು ಕರೆದಿದ್ದಾರೆ. ಚಿನ್ನದ ಮನುಷ್ಯನಿಗೆ ಚಿನ್ನದಲ್ಲೇ ಅಭಿಷೇಕ ಮಾಡಿದ್ದಾರೆ. ‘ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಅಣ್ಣ ಕಾರಣ. ಚಿನ್ನದ ಹೃದಯಕ್ಕೆ ಚಿನ್ನದ ಮಳೆಯ ಸುರಿಮಳೆ’ ಎಂದು ರಜನಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲವ್ಲಿ ಸ್ಟಾರ್ ಪ್ರೇಮ್‌ಗೆ `ಟಗರು’ ನಟಿ ಮಾನ್ವಿತಾ ನಾಯಕಿ

ರಜನಿ ಸದ್ಯ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ವಾರಗಳಿಂದ ಅವರು ಕರ್ನಾಟಕದಲ್ಲೇ ಇದ್ದಾರೆ. ಕಳೆದ ವಾರ ಜೈಲರ್ ಸಿನಿಮಾದ ಶೂಟಿಂಗ್ ಮಂಗಳೂರಿನಲ್ಲಿ ನಡೆದಿತ್ತು. ಶಿವರಾಜ್ ಕುಮಾರ್, ಸಾಧು ಕೋಕಿಲಾ ಸೇರಿದಂತೆ ಹಲವರು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
1 Comment

Leave a Reply

Your email address will not be published. Required fields are marked *