ಬೆಂಗ್ಳೂರಲ್ಲಿರೋ ಎಂಪಿ ಶಾಸಕರಿಗೆ ಭದ್ರತೆ ನೀಡಿ- ರಾಜ್ಯ ಬಿಜೆಪಿಗೆ ಹೈಕಮಾಂಡ್ ಸೂಚನೆ

Public TV
1 Min Read

ಬೆಂಗಳೂರು: ಮಧ್ಯಪ್ರದೇಶದಲ್ಲಿ ರಾಜಕೀಯ ಸನ್ನಿವೇಶ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಸರ್ಕಾರ ಕೆಡವುವ ಪ್ರಕ್ರಿಯೆ ಕ್ಲೈಮಾಕ್ಸ್ ಹಂತ ತಲುಪಿದೆ. ಈ ಮಧ್ಯೆ ಆಪರೇಷನ್ ಕಮಲಕ್ಕೆ ಒಳಗಾದ ಸುಮಾರು 21 ಶಾಸಕರು ಬೆಂಗಳೂರಿಗೆ ನ ಎರಡು ಹೊಟೇಲ್ ಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಈ ಶಾಸಕರಿಗೆ ವಿಚಾರ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಬಿಜೆಪಿಗೆ ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎಂದು ಹೇಳಲಾಗಿದೆ.

ನಿನ್ನೆಯೇ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಮಧ್ಯಪ್ರದೇಶ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಲು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇಂದಿನಿಂದ ಒಂದೇ ಹೊಟೇಲಿನಲ್ಲಿ ಎಲ್ಲ 21 ಆಪರೇಷನ್ ಹಕ್ಕಿಗಳೂ ವಾಸ್ತವ್ಯ ಆರಂಭಿಸಲಿವೆ. ಈಗಲಾಲೇ ಕಳೆದ ಒಂದು ವಾರದಿಂದ ವೈಟ್ ಫೀಲ್ಡ್ ನ ಓಕ್ ವುಡ್ ಹೊಟೇಲಿನಲ್ಲಿರುವ ನಾಲ್ವರು ಶಾಸಕರು ಮಾರತ್ತಹಳ್ಳಿಯ ಆದರ್ಶ್ ರೀಟ್ರೀಟ್ ಹೊಟೇಲಿಗೆ ಇಂದು ಶಿಫ್ಟ್ ಆಗಲಿದ್ದಾರೆ.

ನಿನ್ನೆ ಮಧ್ಯಪ್ರದೇಶದಿಂದ ಹೊಸದಾಗಿ ಆಗಮಿಸಿದ 17 ಶಾಸಕರನ್ನು ಆದರ್ಶ್ ರೀಟ್ರೀಟ್ ಹೊಟೇಲಿನಲ್ಲಿಡಲಾಗಿದೆ. ವೈಟ್ ಫೀಲ್ಡ್‍ನ ಓಕ್ ವುಡ್ ಹೊಟೇಲಿಂದ ನಾಲ್ವರು ಶಾಸಕರು ಇಲ್ಲಿಗೆ ಬಂದರೆ ಎಲ್ಲ 17+4=21 ಶಾಸಕರೂ ಇವತ್ತಿಂದ ಮಾರತ್ತಹಳ್ಳಿಯ ಆದರ್ಶ್ ರೀಟ್ರೀಟ್ ನಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಈಗಾಗಲೇ ಮಧ್ಯಪ್ರದೇಶದ ಎಲ್ಲ 21 ಶಾಸಕರನ್ನೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುಪರ್ಧಿಗೆ ನೀಡಕಾಗಿದೆ ಎನ್ನಲಾಗಿದೆ.

ಮಧ್ಯಪ್ರದೇಶ ಶಾಸಕರ ಬೇಕು ಬೇಡಗಳನ್ನು ಅರವಿಂದ ಲಿಂಬಾವಳಿಯವರೇ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಕೆಲ ದಿನ ಈ ಶಾಸಕರು ಬೆಂಗಳೂರಿನಲ್ಲಿಯೇ ಇರಲಿದ್ದು, ಇಲ್ಲಿಂದಲೇ ರಾಜೀನಾಮೆ ಪ್ರಕಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *