ಸಿಗ್ನಲ್‍ನಲ್ಲಿ ಕಾರು ಹತ್ತಿ ಕತ್ತಲು ಇರೋ ಕಡೆ ಕರ್ಕೊಂಡು ಹೋಗಿ ದೋಚ್ತಾರೆ ಸುಂದ್ರಿಯರು!

Public TV
2 Min Read

ಬೆಂಗಳೂರು: ಇಷ್ಟು ದಿನ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳು ನಡೆಯುತ್ತಿತ್ತು. ಆದ್ರೆ ಇದೀಗ ಹುಡುಗಿಯರೇ ಒಂಟಿಯಾಗಿ ಓಡಾಡೋ ಹುಡುಗರು, ವೃದ್ಧರನ್ನ ದರೋಡೆ ಮಾಡುವ ಘಟನೆಗಳು ನಡೆಯುತ್ತಿವೆ.

ಹೌದು. ಬೆಂಗಳೂರಿನಲ್ಲಿ ತಡ ರಾತ್ರಿ ರಸ್ತೆ ಬದಿ ನಿಂತು ಸ್ಮೈಲ್ ಕೊಡುವ ಯುವತಿಯರ ಎದುರು ನೀವೇನಾದ್ರು ಗಾಡಿ ನಿಲ್ಲಿಸಿದ್ರೆ ನಿಮ್ಮ ಕಥೆ ಮುಗಿಯಿತು. ಒಂಟಿಯಾಗಿ ಓಡಾಡೊ ಪುರುಷರು, ಸಂಜೆ ವಾಕಿಂಗ್ ಮಾಡೊ ವೃದ್ಧರದಿಂದ ಹಣ, ಮೊಬೈಲ್ ದೋಚಿ ಪರಾರಿಯಾಗ್ತಾರೆ.

ನಡೆದಿದ್ದೇನು?: 31 ವರ್ಷದ ಗೌಡ ಎಂಬವರು ಸ್ನೇಹಿತರನ್ನ ಡ್ರಾಪ್ ಮಾಡಿ ಇಂದಿರಾನಗರದ ಬಳಿ ಬಂದಾಗ ಯುವತಿಯೊಬ್ಬಳು ಸ್ಮೈಲ್ ಕೊಡ್ತಾಳೆ. ಅಂತೆಯೇ ಕಾರು ಸಿಗ್ನಲ್‍ನಲ್ಲಿ ನಿಲ್ಲಿಸಿದಾಗ ಯುವತಿ ಕಾರು ಹತ್ತಿದ್ಳು. ಮಾತಾಡ್ತಾ ಇದ್ದ ಹಾಗೆ ಮತ್ತೊಬ್ಬ ಯುವತಿಯೂ ಕಾರು ಹತ್ತಿಯೇ ಬಿಟ್ಟಳು. ಈ ವೇಳೆ ಗೌಡ ಕಾರು ಇಳಿಯುವಂತೆ ಹೇಳಿದ್ರು. ಆದ್ರೆ ಯುವತಿ ಗೌಡ ರನ್ನು ಹಿಂದಿನಿಂದ ತಬ್ಬಿಕೊಂಡು ಕಿಸ್ ಕೇಳಿದ್ದಾಳೆ. ಮಾತ್ರವಲ್ಲದೇ ಕತ್ತಲು ಇರೋ ಕಡೆ ಕಾರು ಚಲಾಯಿಸವಂತೆ ಹೇಳಿದ್ದಾಳೆ. ಈ ಸಂದರ್ಭದಲ್ಲಿ ಗೌಡ್ರು ಪೊಲೀಸ್ ಠಾಣೆಗೆ ಹೋಗ್ತೀನಿ ಅಂದ್ರು. ಇದರಿಂದ ಭಯಬಿದ್ದ ಯುವತಿಯರು ಕಾರಿನಿಂದ ಇಳಿದಿದ್ದಾರೆ. ಮನೆಗೆ ಹೋಗಿ ನೋಡಿದಾಗ ಗೌಡ್ರುಗೆ ಶಾಕ್ ಕಾದಿತ್ತು. ಯಾಕಂದ್ರೆ ಅವರ ಬಳಿಯಿದ್ದ 50 ಗ್ರಾಂ ಚಿನ್ನದ ಸರ ಕಳವಾಗಿತ್ತು.

ಇದೇ ರೀತಿಯ ಅನುಭವ ಗೌಡ ಅವರ ಸ್ನೇಹಿತರಿಗೂ ಆಗಿತ್ತು. ಹಲಸೂರು ಬಳಿ ಯುವತಿಯೊಬ್ಬಳು ಕಾರು ಹತ್ತಿ ತನ್ನ ಟೀಶರ್ಟ್ ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾಳೆ. ಒಂದು ವೇಳೆ ನೀನು ಹಣ ಕೊಡದಿದ್ದರೆ ಕೂಗಿಕೊಳ್ಳುವಾಗಿ ಬೆದರಿಸಿದ್ದಾಳೆ. ಹಣ ಕೊಡಲೆಂದು ವ್ಯಾಲೆಟ್ ತೆಗೆದಾಗ ವ್ಯಾಲೆಟ್ ಹಾಗೂ ಮೊಬೈಲ್ ಕಸಿದು ಯುವತಿ ಪರಾರಿಯಾಗಿದ್ದಾಳೆ.

61 ವರ್ಷದ ನಿವೃತ್ತ ಡಿಆರ್‍ಡಿಒ ಅಧಿಕಾರಿಗೂ ಇದೇ ಅನುಭವ. ಅಧಿಕಾರಿ ನ್ಯೂ ತಿಪ್ಪಸಂದ್ರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಬೆದರಿಸಿ ಹಣ ಲಪಾಟಾಯಿಸಿದ್ದಾಳೆ.

ಹೆಲ್ಮೆಟ್ ಹಾಕಿದ್ದ ಯುವತಿ ಅಧಿಕಾರಿ ಬಳಿ ಬಂದು ನಾನು ಯಾರು ಗೊತ್ತಾಯ್ತ ಅಂದ್ಲು. ಎಲ್ಲೋ ನೋಡಿದ ಹಾಗಿದೆ ಹೆಲ್ಮೆಟ್ ತೆಗೆಯಿರಿ ಅಂತಾ ಅಧಿಕಾರಿ ಹೇಳಿದ್ರು. ಅಂತೆಯೇ ಹೆಲ್ಮೆಟ್ ತೆಗೆದು ಯುವತಿ ಬೆದರಿಸಲು ಆರಂಭಿಸಿದ್ದಾಳೆ. ಈ ವೇಳೆ ಮಾನ ಮರ್ಯಾದೆಗೆ ಅಂಜಿ ನಿವೃತ್ತ ಅಧಿಕಾರಿ ಹಣ ಕೊಟ್ಟಿದ್ದಾರೆ.

ಸದ್ಯ ಈ ಯುವತಿಯರ ಗ್ಯಾಂಗ್ ಬಗ್ಗೆ ಜೆಬಿ ನಗರ, ಇಂದಿರಾನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *