ಹದಿಹರೆಯದ ಬಾಲಕಿಯರೇ ಎಚ್ಚರ- ಫೇಸ್ ಬುಕ್ ಬಳಸೋ ಮುನ್ನ ಈ ಸ್ಟೋರಿ ಓದಿ

Public TV
1 Min Read

ಬೆಂಗಳೂರು: ಬಾಲಿವುಡ್ ಫಿಲಂನಲ್ಲಿ ಚಾನ್ಸ್ ಕೊಡಿಸುವುದಾಗಿ ಶ್ರೀಲಂಕಾ ಬಾಲಕಿಯನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಸತೀಶ್ ಪಾಟೀಲ್ (35) ರಮೇಶ್ (40) ಶಂಭು (20) ಬಂಧಿತ ಆರೋಪಿಗಳು. ಸತೀಶ್ ಪಾಟೀಲ್, ಬಾಲಕಿಗೆ ಫೇಸ್ ಬುಕ್‍ನಲ್ಲಿ ಪರಿಚಯವಾಗಿದ್ದು, ಎರಡು ವರ್ಷಗಳಿಂದ ಸತೀಶ್ ಜೊತೆ ಚಾಟಿಂಗ್ ನಲ್ಲಿದ್ದಳು. ಈ ವೇಳೆ ನನಗೆ ಬಾಲಿವುಡ್ ಫಿಲಂ ಇಂಡಸ್ಟ್ರಿ ಪರಿಚಯವಿದೆ ನಿನಗೆ ಚಾನ್ಸ್ ಕೊಡಿಸುತ್ತೇನೆ ಎಂದು ಸತೀಶ್ ಹೇಳಿದ್ದಾನೆ.

ಸತೀಶ್ ಮಾತನ್ನು ನಂಬಿದ ಬಾಲಕಿ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿಗೆ ಬಂದ ನಂತರ ಆ ಶೂಟಿಂಗ್, ಫೋಟೋಶೂಟ್ ಎಂದು ಹಣ ಸತೀಶ್ ಪೀಕುತ್ತಿದ್ದನು. ಅಷ್ಟೇ ಅಲ್ಲದೇ ಆರೋಪಿ ಬಾಂಬೆ, ಹಾವೇರಿ, ಬೆಂಗಳೂರು ಎಂದು ಬಾಲಕಿಯನ್ನು ಓಡಾಡಿಸಿದ್ದನು. ಅಲ್ಲದೇ ಬಾಲಕಿಯನ್ನು ಬೇರೆ ತರಹ ಬಳಸಿಕೊಳ್ಳಲು ನೋಡುತ್ತಿದ್ದ, ಆದರೆ ಬಾಲಕಿ ತನ್ನ ತಾಯಿ ಜೊತೆಗೆ ಇದ್ದುದರಿಂದ ರಕ್ಷಣೆಯಾಗಿದ್ದಳು.

ಸತೀಶ್ ಹೆಚ್ಚಿನ ಹಣ ಕೊಡದಿದ್ದಾಗ ಅವರನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಮಾನವ ಕಳ್ಳ ಸಾಗಣೆಕೆಯಲ್ಲಿ ಸಿಲುಕಿದ್ದ ಯುವತಿ ರಕ್ಷಿಸಿದ ಸ್ವಯಂ ಸೇವಕ ಸಂಘಟನೆ ತಲಾಶ್ ಅಸೋಸಿಯಷನ್ ಎನ್‍ಜಿಓ ಮೂಲಕ ಬಾಲಕಿಯನ್ನು ರಕ್ಷಣೆ ಮಾಡಿ, ಉಪ್ಪಾರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಾಯಿ ಜೊತೆ ಬಾಲಕಿಯನ್ನು ಶ್ರೀಲಂಕಾಗೆ ವಾಪಸ್ ತೆರಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *