ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

Public TV
2 Min Read

ಭೋಪಾಲ್: ಬರಗಾಲದ ಪರಿಸ್ಥಿತಿ ಉಂಟಾಗಿದ್ದರಿಂದ ಹೆದರಿದ ಹಳ್ಳಿಗರು ಮಳೆ ದೇವರ ಸಂತೃಪ್ತಿಗಾಗಿ ಹರೆಯದ ಹುಡುಗಿಯರನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

ದಾಮೋಹ್ ಜಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಬನಿಯಾ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಹೀಗೊಂದು ಆಚರಣೆ ನಡೆದಿದೆ. ಇಲ್ಲಿ ಬೆತ್ತಲೆ ಸಾಗಿದ ಹುಡುಗಿಯರು ಅಪ್ರಾಪ್ತೆಯರಾದರೂ ಪುಟ್ಟ ಮಕ್ಕಳಲ್ಲ. ಇವರೆಲ್ಲ ಹದಿಹರೆಯಕ್ಕೆ ಕಾಲಿಟ್ಟವರು. ಸದ್ಯ ಘಟನೆಯ ಬಗೆಗಿನ ವರದಿಯನ್ನು ಜಿಲ್ಲಾಡಳಿತ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಕಳಿಸಿಕೊಟ್ಟಿದೆ.

ಮಳೆಯಾಗಲಿಲ್ಲ. ಹೀಗಾದರೆ ಬರಗಾಲ ಕಟ್ಟಿಟ್ಟ ಬುತ್ತಿ ಎಂದು ಭಾವಿಸಿದ ಸ್ಥಳೀಯರು ವರುಣ ದೇವನ ಸಂತೃಪ್ತಿಗೊಳಿಸಲು ಹೀಗೊಂದು ಆಚರಣೆ ನಡೆಸಿದ್ದಾಗಿ ನಮಗೂ ಮಾಹಿತಿ ಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದೇವೆ. ಇದೊಂದು ಮೂಢನಂಬಿಕೆ ಆಚರಣೆಯಾಗಿದೆ. ಈ ಹುಡುಗಿಯರನ್ನು ಬಲವಂತವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದು ಸಾಬೀತಾದರೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ದಾಮೋಹ್ ಪೊಲೀಸ್ ಅಧಿಕಾರಿ ಡಿ. ಆರ್. ತೆನಿವಾರ್ ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ

ಆಚರಣೆ ಏನು?
ಸ್ಥಳೀಯರ ನಂಬಿಕೆಯ ಆಚರಣೆ ಇದಾಗಿದ್ದು, ಹದಿಹರೆಯದ ಯುವತಿಯರು ತಮ್ಮ ಭುಜದ ಮೇಲೆ ಮರದ ಈಟಿಯನ್ನು ಹೊತ್ತುಕೊಂಡು ಮೆರವಣಿಗೆ ಮಾಡಬೇಕು. ಆ ಮರದ ಈಟಿಯ ಮೇಲೆ ಕಪ್ಪೆಯನ್ನು ಕಟ್ಟಿಡಲಾಗುತ್ತದೆ. ಹೀಗೆ ಬೆತ್ತಲೆ ಹೊರಟ ಹುಡುಗಿಯರೊಟ್ಟಿಗೆ ಮಹಿಳೆಯರು ಕೂಡ ಹೆಜ್ಜೆಹಾಕಬೇಕು ಮತ್ತು ಅವರು ಮಳೆ ದೇವರು ಅಂದರೆ ವರುಣನನ್ನು ಹೊಗಳುವ, ಓಲೈಸುವ ಭಜನೆಗಳನ್ನು ಹಾಡುತ್ತಿರಬೇಕು. ಇದನ್ನೂ ಓದಿ: ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ

ಮಳೆಯಾಗದಿದ್ದರೆ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದನ್ನು ನಾವು ಸರ್ವೇಸಾಮಾನ್ಯವಾಗಿ ಕೇಳಿದ್ದೇವೆ. ಕೆಲವು ಹೋಮ-ಹವನಾದಿಗಳನ್ನು ಮಾಡುವುದೂ ಇದೆ. ಇವೆಲ್ಲ ಯಾರಿಗೂ ಅಪಾಯ ಆಗುವಂಥದ್ದಲ್ಲ, ಅವಮಾನ ಆಗುವಂಥದ್ದಲ್ಲ, ಮಾನ ಹೋಗುವಂಥದ್ದೂ ಅಲ್ಲ. ಆದರೆ ಹೀಗೆ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದು ತೀರ ಹೀನ ಕೃತ್ಯವಾಗಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

Share This Article
Leave a Comment

Leave a Reply

Your email address will not be published. Required fields are marked *