ಕಾರಿನಡಿ ಸಿಲುಕಿದರೂ, ಪ್ರಾಣಾಪಾಯದಿಂದ ಪಾರಾದ ಬಾಲಕಿ: ವಿಡಿಯೋ ನೋಡಿ

Public TV
1 Min Read

ಹಾಸನ: ನಗರದ ಕುವೆಂಪು ಬಡಾವಣೆಯಲ್ಲಿ ಚಾಲಕನೊಬ್ಬ ಕಾರನ್ನು ಹಿಂತೆಗೆದುಕೊಳ್ಳುವ ಭರದಲ್ಲಿ ಬಾಲಕಿ ಮೇಲೆಯೇ ಕಾರನ್ನು ಹರಿಸಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಮೃತವರ್ಷಿಣಿ (14) ಪ್ರಾಣಾಪಾಯದಿಂದ ಪಾರಾದ ಬಾಲಕಿ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಕುವೆಂಪು ನಗರದಲ್ಲಿರುವ ಮನೆಯ ಮುಂದೆ ಬಾಲಕಿಯು ನಿಂತಿರುವಾಗ, ಏಕಾಏಕಿ ಮಾರುತಿ ಕಂಪೆನಿಯ ಆಲ್ಟೋ ಕಾರೊಂದು ಹಿಂಬದಿಯಿಂದ ಆಕೆಯ ಮೇಲೆ ಹರಿದು ಹೋಗಿದೆ. ಕಾರ್ ಹರಿದ ಪರಿಣಾಮ ಬಾಲಕಿ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾಳೆ. ಬಾಲಕಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂಧ ಸ್ಥಳೀಯರು ಹತ್ತಿರದ ಎಂಬ್ರಾಯಿಡರಿ ಸೆಂಟರ್‍ನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬಾಲಕಿಯ ಮೇಲೆ ಕಾರ್ ಹರಿದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಬಾಲಕಿ ಹುಟ್ಟಿನಿಂದಲೂ ಕೊಂಚ ಬುದ್ದಿಮಾಂದ್ಯಳಾಗಿರುವ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಬೇಜವಾಬ್ದಾರಿ ರೀತಿಯಲ್ಲಿ ಕಾರ್ ಚಲಾಯಿಸಿ ಮಗಳ ಮೇಲೆ ಹರಿಸಿರುವ ಕಾರು ಚಾಲಕನನ್ನು ಕಂಡು ಹಿಡಿದು, ನ್ಯಾಯ ದೊರಕಿಸಿ ಎಂದು ಪೋಷಕರು ಆಗ್ರಹಿಸಿದ್ದಾರೆ.

https://www.youtube.com/watch?v=1spHMGbVDZo

Share This Article
Leave a Comment

Leave a Reply

Your email address will not be published. Required fields are marked *