ಶಂಕಿತ ಡೆಂಗ್ಯೂಗೆ ಬಾಲಕಿ ಬಲಿ- ಶುಚಿತ್ವಕ್ಕೆ ಮುಂದಾದ ನಗರಸಭೆ ವಿರುದ್ಧ ಸ್ಥಳೀಯರ ಆಕ್ರೋಶ

Public TV
1 Min Read

ರಾಮನಗರ: ಶಂಕಿತ ಡೆಂಗ್ಯೂ ಜ್ವರಕ್ಕೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

ಚನ್ನಪಟ್ಟಣದ ಮೂರ್ತಿಮಹಲ್ ರಸ್ತೆಯ ನಿವಾಸಿ ಗುರುಮೂರ್ತಿ ಎಂಬುವವರ ಪುತ್ರಿ ಧೃತಿ (6) ಮೃತ ದುರ್ದೈವಿ. ಕಳೆದ ನಾಲ್ಕು ದಿನಗಳಿಂದ ಮೃತ ಬಾಲಕಿ ವಿಪರೀತ ಜ್ವರದಿಂದ ಬಳಲುತ್ತಾ ಇದ್ದಳು. ಹೀಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ರೂ ಗುಣಮುಖವಾಗಿರಲಿಲ್ಲ. ಇದ್ರಿಂದ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಬಾಲಕಿ ಸಾವನ್ನಪ್ಪಿದ್ದಾಳೆ.

ಘಟನೆ ಬಳಿಕ ಎಚ್ಚೆತ್ತ ನಗರಸಭೆ ಇದೀಗ ಬಡಾವಣೆಯ ಶುಚಿತ್ವಕ್ಕೆ ಮುಂದಾಗಿದೆ. ಇದ್ರಿಂದ ಸ್ಥಳೀಯ ವಾಸಿಗಳು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *