ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್‌ ಮನವಿ

Public TV
1 Min Read

ಶ್ರೀನಗರ: ವಿನಾಶ ಮಾಡುವ ಹಾಗೂ ಜನರಲ್ಲಿ ದುಃಖ ತರುವ ಶಾಸ್ತ್ರಾಸ್ತ್ರಗಳನ್ನು ತ್ಯಜಿಸಿ ಎಂದು ಉಗ್ರರಲ್ಲಿ ಕಾಂಗ್ರೆಸ್‌ ಮಾಜಿ ನಾಯಕ ಗುಲಾಂ ನಬಿ ಆಜಾದ್‌ (Ghulam Nabi Azad) ಮನವಿ ಮಾಡಿದ್ದಾರೆ.

ಭಯೋತ್ಪಾದಕ ಪ್ರಚಾರದ ಸಂಸ್ಥೆಯೊಂದು ಆಜಾದ್ ವಿರುದ್ಧ ಕೊಲೆ ಬೆದರಿಕೆ ಹಾಕಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ದೇಶದ್ರೋಹಿ ಎಂದು ಕರೆದಿದೆ. ಈ ಕುರಿತು ಮಾತನಾಡಿರುವ ಆಜಾದ್‌, ಬಂದೂಕು ಸಂಸ್ಕೃತಿಯು ಪೀಳಿಗೆಗೆ ಹಾನಿಯನ್ನುಂಟು ಮಾಡಿದೆ. ಕಾಶ್ಮೀರ ಕಣಿವೆಯಲ್ಲಿ ಹೆಚ್ಚು ಯುವಕರು ಸಾಯುವುದನ್ನು ನೋಡಲು ಜನರು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಗೋಡೆ ಕುಸಿದು 9 ಮಂದಿ ಸಾವು

ಬಂದೂಕು ಹಿಡಿದವರಿಗೆ ನನ್ನ ವಿನಂತಿ. ಈ ಬಂದೂಕು ಪರಿಹಾರವಲ್ಲ. ಗನ್ ಮಾತ್ರ ವಿನಾಶ ಮತ್ತು ದುಃಖವನ್ನು ತರುತ್ತದೆ ಎಂದು ಶಸ್ತ್ರಾಸ್ತ್ರ ಬಿಡುವಂತೆ ಉಗ್ರರಿಗೆ ಮನವಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದನೆ ನಡೆಯುತ್ತಿರುವುದಕ್ಕೆ ಪಾಕಿಸ್ತಾನವನ್ನು ದೂಷಿಸಿದ ಆಜಾದ್, ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರವು ಸಾವಿರಾರು ಮಹಿಳೆಯರು, ವಿಧವೆಯರು ಮತ್ತು ಲಕ್ಷಗಟ್ಟಲೆ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಕಾರು – ಮಹಿಳಾ ಟೆಕ್ಕಿಗಳಿಬ್ಬರ ದುರ್ಮರಣ

ನಾನು ಹೆಚ್ಚು ರಕ್ತಪಾತ ಮತ್ತು ಯುವಕರ ಸಾವನ್ನು ನೋಡಲು ಬಯಸುವುದಿಲ್ಲ. ಸ್ವಂತ ಮನೆಯನ್ನೇ ಸರಿಯಾಗಿ ಕಟ್ಟಲಾಗದ ಸೋಲಿನ ದೇಶವು ನಮ್ಮ ರಾಜ್ಯ ಮತ್ತು ದೇಶವನ್ನು ನಾಶ ಮಾಡಲು ಹೊರಟಿದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *