ಉಡುಪಿ: ಜಿಲ್ಲೆಯ ಪ್ರಸಿದ್ಧ ಕಾರ್ಕಳ ಅತ್ತೂರು ಚರ್ಚ್ನಲ್ಲಿ ತಡರಾತ್ರಿ ಬೆಂಕಿ ಅವಘಢ ಸಂಭವಿಸಿದೆ. ಚರ್ಚ ಮುಂಭಾಗ ಗೇಟ್ ಬಳಿ ಅಳವಡಿಸಲಾದ ಜನರೇಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಸ್ಫೋಟ ಸಂಭವಿಸಿದೆ.
ಸಂತ್ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವದ ಮೊದಲ ದಿನದಂದು ಈ ಅವಘಡ ಸಂಭವಿಸಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾರಿ ದೊಡ್ಡ ದುರಂತ ತಪ್ಪಿದೆ. ಜನರೇಟರ್ ಸ್ಫೋಟಗೊಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾವಿರಾರು ಜನ ಸೇರುವ ಕಾರ್ಯಕ್ರಮದಲ್ಲಿ ಬೆಂಕಿ ಅವಘಡವಾಗಿದ್ದು ಕೆಲಕಾಲ ಎಲ್ಲರ ಆತಂಕಕ್ಕೆ ಕಾರಣವಾಯ್ತು. ಅತ್ತೂರು ಚರ್ಚ್ ಕೆಥೋಲಿಕ್ ಕ್ರೈಸ್ತ ಚರ್ಚ್ ಆದರೂ ಹಿಂದೂ ಮುಸಲ್ಮಾನ ಸೇರಿದಂತೆ ಹಲವಾರು ಧರ್ಮೀಯರು ಲಾರೆನ್ಸರ ಚರ್ಚ್ಗೆ ಬರುತ್ತಾರೆ. ಕ್ಯಾಂಡೆಲ್ ಹಚ್ಚುವುದೇ ಇಲ್ಲಿನ ವಿಶೇಷ ಹರಕೆ ಮತ್ತು ಸೇವೆಯಾಗಿದೆ.