ಅಮ್ಮನ ತ್ಯಾಗ ನೆನೆದು ಗಳಗಳನೆ ಅತ್ತ `ಗೀತಾ’ ನಟಿ ಭವ್ಯಾ ಗೌಡ

Public TV
2 Min Read

ಕಿರುತೆರೆಯ ಪ್ರತಿಭಾನ್ವಿತ ನಟಿ ಭವ್ಯಾ ಗೌಡ (Actress Bhavya Gowda) ಅವರು `ಗೀತಾ’ (Geetha Serial) ಸೀರಿಯಲ್ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಬಣ್ಣದ ಬದುಕಿಗೆ ಬರುವ ಮುನ್ನ ಮತ್ತು ಬಂದ ಮೇಲೆ ಎದುರಿಸಿದ ಸಂಕಷ್ಟಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಅಮ್ಮನ ತ್ಯಾಗ ನೆನೆದು ನನ್ನಮ್ಮ ಸೂಪರ್ ಸ್ಟಾರ್ -2 ವೇದಿಕೆಯಲ್ಲಿ ಭವ್ಯಾ ಕಣ್ಣೀರಿಟ್ಟಿದ್ದಾರೆ.

ಭವ್ಯಾ ಗೌಡ ಅವರು ಇತ್ತೀಚಿಗೆ ನನ್ನಮ್ಮ ಸೂಪರ್ ಸ್ಟಾರ್-2 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಈ ವೇಳೆ ಕೈ ಹಿಡಿಯಲಿರುವ ಹುಡುಗ ಹೇಗಿರಬೇಕು ಎಂದು ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಕೇಳಿದ್ದಾರೆ. ಈಗಿನ ಕಾಲದ ಮಕ್ಕಳು ನಾವು ಇಷ್ಟ ಪಟ್ಟ ರೀತಿ ಏನೂ ಇಲ್ಲ ಅವರು ಆಯ್ಕೆ ಮಾಡುವುದನ್ನು ನಾವು ಒಪ್ಪಿಕೊಳ್ಳಬೇಕು ಖಂಡಿತ ಒಪ್ಪಿಕೊಳ್ಳುವೆ. ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂದು ಗೀತಾ ಅವರ ತಾಯಿ ಹೇಳಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಆಗಬೇಕು ಅನ್ನೋ ಆಸೆ ತುಂಬಾ ಇದೆ ಎಂದು ಗೀತಾ ಹೇಳಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಅವರ ತಾಯಿನೇ ಸೂಪರ್ ಸ್ಟಾರ್. ನನ್ನ ಲೈಫಲ್ಲಿ ಅಮ್ಮ ಯಾಕೆ ಸ್ಟಾರ್ ಅಂದ್ರೆ ಎಲ್ಲನೂ ತ್ಯಾಗ ಮಾಡಿದ್ದಾರೆ. ನಾವು ನಾಲ್ಕು ಜನ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಿಂದ ಕಷ್ಟ ನೋಡಿಕೊಂಡು ಬೆಳೆದಿದ್ದೇವೆ. ನಾವು ನಾಲ್ಕು ಜನರನ್ನು ಬೆಳೆಸುವಾಗ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ನಿಮ್ಮ ಹೆಣ್ಣು ಮಕ್ಕಳು ಬೀದಿಗೆ ತರುತ್ತಾರೆ ಬಿಡು ಅಂತ ಮಾತನಾಡಿದ್ದಾರೆ. ಆ ನೋವನ್ನು ಬಚ್ಚಿಟ್ಟುಕೊಂಡು ಕಷ್ಟ ಪಟ್ಟು ಇಷ್ಟ ಪಟ್ಟು ಬೆಳೆಸಿದ್ದಾರೆ. ನಾನು ಸ್ಕ್ರೀನ್ ಮೇಲೆ ಬರಬೇಕು ಅನ್ನೋದು ನನ್ನ ತಾಯಿ ಆಸೆ ಆಗಿತ್ತು. ಸುಮ್ಮನೆ ಪ್ರಯತ್ನ ಪಟ್ಟೆ ಅವಕಾಶ ಸಿಗ್ತು. ಅವಕಾಶ ಸಿಕ್ಕಿದ ಮೇಲೆ ತುಂಬಾ ಅವಮಾನ ಎದುರಿಸಿದೆ. ದಿನ ಟ್ರೋಲ್ ಮಾಡುತ್ತಿದ್ದರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು. ಆಗ ಅಮ್ಮ ಒಂದು ಮಾತು ಹೇಳಿದ್ದರು “ನೀನು ಏನೆಂದು ನಿನಗೆ ಗೊತ್ತು ನನಗೆ ನಿನ್ನ ಬಗ್ಗೆ ಗೊತ್ತು” ಎಂದು ಹೇಳಿ ಧೈರ್ಯ ತುಂಬಿದರು. ನನ್ನ ತಾಯಿ (Mother) ಆಶೀರ್ವಾದದಿಂದ (Blessings) ಇಷ್ಟು ನಟನೆಯಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಗೀತಾ ನಟಿ ಭವ್ಯಾ ಮಾತನಾಡಿದ್ದಾರೆ. ಇದನ್ನೂ ಓದಿ: ಅಯ್ಯಂಗಾರ್‌ ಸಂಪ್ರದಾಯದಂತೆ ನಿರ್ದೇಶಕ ಎಸ್.ಕೆ ಭಗವಾನ್ ಅಂತ್ಯಕ್ರಿಯೆ

 

View this post on Instagram

 

A post shared by Bhavya Gowda (@bhavyagowda670)

ಅಮ್ಮ ಮೊದಲು ನಿನಗೆ ಕ್ಷಮೆ ಕೇಳುವೆ. ಶೂಟಿಂಗ್ ಕೆಲಸ ಪ್ರೆಶರ್ ಕೋಪ ಎಲ್ಲವೂ ನಿನ್ನ ಮೇಲೆ ತೋರಿಸಿರುವೆ. ದಿನ ಬೆಳಗ್ಗೆ 4 ಗಂಟೆಗೆ ಎದ್ದು ಬಾಕ್ಸ್ ಪ್ಯಾಕ್ ಮಾಡುವೆ. ನೀನು ನನ್ನ ಮೇಲೆ ತುಂಬಾ ಪ್ರೀತಿ ತೋರಿಸುವೆ ನಾನು ತುಂಬಾ ಕಿರಿಕಿರಿ ಮಾಡಿದ್ದರೂ ಅದೇ ಪ್ರೀತಿ ನನಗೆ ಕೊಡುತ್ತಿರುವೆ. ನಿನ್ನ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಸಮಯ ಕೊಡುವೆ. ಹೈದರಾಬಾದ್‌ಗೆ ಹೋದಾಗ ಹುಷಾರಿಯಿಲ್ಲ ಅನ್ನೋ ವಿಚಾರ ನಿನ್ನಿಂದ ಮುಚ್ಚಿಟಾಗ ನೀನು ಫೋನ್ ಮಾಡಿ ಅತ್ತಿರುವೆ. ಇದಕ್ಕೆಲ್ಲಾ ಕ್ಷಮೆ ಕೇಳುವೆ. ನನ್ನ ಇರಿಟೇಷನ್ ನಾನೇ ಅನುಭವಿಸುವೆ ಇನ್ಮುಂದೆ ನಿನ್ನ ಮೇಲೆ ತೋರಿಸುವುದಿಲ್ಲ ಎಂದು ಭವ್ಯಾ ಮಾತನಾಡಿದ್ದಾರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *