ಗೌರಿ ಹತ್ಯೆ: ಮಾಜಿ ನಕ್ಸಲ್, ನಕ್ಸಲ್ ಪರ ವಾದಿಗಳ ಮೇಲೆ ಕಣ್ಣಿಟ್ಟ ಎಸ್‍ಐಟಿ

Public TV
1 Min Read

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ತನಿಖೆ ನಡೆಸ್ತಿರೋ ಎಸ್‍ಐಟಿ ಇದೀಗ ಮಾಜಿ ನಕ್ಸಲ್ ಮತ್ತು ನಕ್ಸಲ್ ಪರ ವಾದಿಗಳ ಮೇಲೆ ಕಣ್ಣಿಟ್ಟಿದೆ.

ಗೌರಿ ಅವರು ಮುಖ್ಯವಾಹಿನಿಗೆ ತಂದ ನಕ್ಸಲರು ಸೇರಿದಂತೆ ಮಾಜಿಯಾಗಿರೋ ಸುಮಾರು 25ಕ್ಕೂ ಹೆಚ್ಚು ನಕ್ಸಲರು ಹಾಗು ಅವರ ಪರ ಒಲವು ವ್ಯಕ್ತಪಡಿಸುತ್ತಿರುವವರನ್ನು ತನಿಖೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ.

ನಕ್ಸಲ್ ವಿಕ್ರಮ್ ಗೌಡ ಈ ಹಿಂದೆ ಬರೆದಿರೋ ಬೆದರಿಕೆ ಪತ್ರಗಳು ಹಾಗು ಗೌರಿ ಅವರೊಂದಿಗೆ ಮಾಡಿಕೊಂಡಿರೊ ಜಗಳದ ಬಗ್ಗೆ ಎಸ್‍ಐಟಿ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರು, ಚಿಕ್ಕಮಗಳೂರು ಹಾಗು ಶೃಂಗೇರಿ ಭಾಗದ ಕೆಲವು ನಕ್ಸಲ್ ಮಾಹಿತಿದಾರರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.

ಇದಷ್ಟೇ ಅಲ್ಲದೇ ಗೌರಿ ಲಂಕೇಶ್ ಸಂಪಾದಕತ್ವದ ಒಂದೆರಡು ವರ್ಷಗಳ ಲಂಕೇಶ್ ಪತ್ರಿಕೆಯ ಅಧ್ಯಯನಕ್ಕೆ ಎಸ್‍ಐಟಿ ಒಂದು ತಂಡವನ್ನೇ ರಚಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *