ಕೃಷ್ಣನ ಊರಿನಲ್ಲಿ ಗಣಪತಿಯ ಹಬ್ಬ – ಎಐ ಪರಿಕಲ್ಪನೆಯಲ್ಲಿ ಮೂಡಿದ ಬಾಲ ಗಣಪ

Public TV
0 Min Read

– ಕಿನ್ನಿಮೂಲ್ಕಿ ಪಂಚಮುಖಿ ಹೇರಂಭಾ ಗಣಪತಿ

ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳ್ಳಂಬೆಳಗ್ಗೆ ಕಲಾವಿದರ ಮನೆಯಿಂದ ಪೂಜೆ ಮಾಡಿ ವಿಶೇಷ ಗಣಪತಿಗಳನ್ನು ಮನೆ, ಪೆಂಡಾಲ್ ಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.

ಕಿನ್ನಿಮೂಲ್ಕಿಯ ಕಾರ್ತಿಕ್ ಕೌಶಿಕ್ ಸಹೋದರರು ಕೃಷ್ಣನನ್ನು ಗಣಪತಿಯನ್ನು ಸೃಷ್ಟಿ ಮಾಡಿದ್ದಾರೆ. ಎಐ ಫೋಟೋದಿಂದ ಪ್ರೇರಣೆಯಿಂದ ಗಣಪತಿಯನ್ನು ರಚಿಸಿದ್ದಾರೆ. ಕೈಯಲ್ಲಿ ಕಬ್ಬು ಹಿಡಿದು ಬಾಲ ಗಣಪತಿ ಕಂಗೊಳಿಸುತ್ತಿದ್ದಾನೆ.

ಈ ನಡುವೆ 20ನೇ ವರ್ಷದ ಕಿನ್ನಿಮೂಲ್ಕಿ ಗಣೇಶೋತ್ಸವಕ್ಕೆ ಪಂಚಮುಖಿ ಗಣಪತಿ ರಚಿಸಲಾಗಿದೆ. ಐದು ಮುಖಗಳ ಸುಂದರ ಗಣಪತಿ ಎಲ್ಲರನ್ನ ಸೆಳೆಯುತ್ತಿದ್ದಾನೆ.

Share This Article