ನೀರಿಗಾಗಿ ಅರಣ್ಯದಿಂದ ನಾಡಿಗೆ ಬಂದ ಸಿಂಹದ ಮರಿ ಬಾವಿಗೆ ಬಿತ್ತು: ವಿಡಿಯೋ ನೋಡಿ

Public TV
1 Min Read

ಗಾಂಧಿನಗರ: ಇತ್ತೀಚಿಗೆ ಕಾಡು ಪ್ರಾಣಿಗಳು ಕಾಡಿನಲ್ಲಿ ಆಹಾರ ಇಲ್ಲದೆ ಇರುವುದರಿಂದ ನಾಡಿನ ಕಡೆ ಬರುವುದು ಸಾಮಾನ್ಯವಾಗಿದೆ. ಆದ್ರೆ ಗುಜರಾತಿನಲ್ಲಿ ಸಿಂಹದ ಮರಿಯೊಂದು ಆಹಾರಕ್ಕಾಗಿ ಅರಣ್ಯದಿಂದ ನಾಡಿನ ಕಡೆಗೆ ಬರುವಾಗ ಕಾಲುಜಾರಿ ಬಾವಿಯೊಳಗೆ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ.

ಹೌದು, ಗುಜರಾತ್‍ದ ಅಮರಾಪುರ ಹಳ್ಳಿಯ ಗಿರ್ ಅರಣ್ಯದ ಸಮೀಪದಲ್ಲೇ ಇರುವ 80 ಅಡಿ ಹೊಂದಿರುವ ಕೊಳವೆ ಬಾವಿಯೊಳಗೆ ನೀರಿಗಾಗಿ ಇಣುಕುವಾಗ ಕಾಲು ಜಾರಿ ಒಳಗೆ ಬಿದ್ದಿದೆ.

ಜನರು ನೀರು ತರಲು ಬಂದಾಗ ಬಾವಿಯೊಳಗೆ ಸಿಂಹದ ಮರಿ ಬಿದ್ದಿರುವುದನ್ನು ನೋಡಿದ್ದಾರೆ. ಸಿಂಹದ ಮರಿ ದಾರಿ ತಪ್ಪಿ ಗೊತ್ತಿಲ್ಲದೇ ನೀರಿನೊಳಗೆ ಹಾರಿರಬಹುದು ಎಂದು ತಿಳಿದುಕೊಂಡು ಕೂಡಲೇ ಹಳ್ಳಿ ಜನ ಅರಣ್ಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಸಿಂಹದ ಮರಿಯನ್ನು ಸುರಕ್ಷಿತವಾಗಿ ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *