ಪಾಕಿಸ್ತಾನ ಜಿಂದಾಬಾದ್ ಅಂದವ್ರ ನಾಲಿಗೆ ಕತ್ತರಿಸಿ: ಶ್ರೀರಾಮಸೇನೆ ಗೌರವಾಧ್ಯಕ್ಷ

Public TV
1 Min Read

– ಗಾಂಧೀಜಿ ಮಹಾತ್ಮರಾದದ್ದು ದುರಾದೃಷ್ಟ

ಗದಗ: ಪಾಕಿಸ್ತಾನ ಜಿಂದಾಬಾದ್ ಎಂದವರ ನಾಲಿಗೆ ಕತ್ತರಿಸಿ ಎಂದು ಶ್ರೀರಾಮಸೇನೆ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಗದಗ ನಗರದ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಶಿವಾಜಿ ಮಹಾರಾಜರ 393 ನೇ ಜಯಂತೋತ್ಸವದ ಬೃಹತ್ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಈ ಬಹಿರಂಗ ಸಭೆಯಲ್ಲಿ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ.

ಪಾಕ್ತಿಸಾನ ಜಿಂದಾಬಾದ್ ಅಂದ ಹುಬ್ಬಳ್ಳಿ ಕೆ.ಎಲ್.ಇ ಮುಸ್ಲಿಂ ವಿದ್ಯಾರ್ಥಿಗಳಿಗೆ ಉತ್ತರ ನೀಡಬೇಕಾಗಿದೆ. ಪಾಕ್ತಿಸಾನ ಜಿಂದಾಬಾದ್ ಅಂತ ಹೇಳಲಿಕ್ಕೆ ಇದು ಇಮ್ರಾನ್ ಖಾನ್ ದೇಶವಲ್ಲ, ಇದು ಇಮ್ರಾನ್ ಖಾನ್ ಅಪ್ಪ ಮೋದಿ, ಶಿವಾಜಿ ದೇಶ. ಭಾರತ ದೇಶದ ಅನ್ನವನ್ನು ತಿಂದು ಪಾಕ್ತಿಸಾನಕ್ಕೆ ಜಿಂದಾಬಾದ್ ಅಂತ ಹೇಳಿದವರ ನಾಲಿಗೆ ಕತ್ತರಿಸಿ ತಂದರೆ, ಒಂದು ನಾಲಿಗೆಗೆ ಒಂದು ಲಕ್ಷದಂತೆ ಮೂರು ನಾಲಿಗೆಗೆ ಮೂರು ಲಕ್ಷ ರೂಪಾಯಿ ಬಹುಮಾನವನ್ನು ಶ್ರೀರಾಮಸೇನೆ ವತಿಯಿಂದ ವಿತರಣೆ ಮಾಡುವುದಾಗಿ ಕರೆ ನೀಡಿದ್ದಾರೆ.

ನಮಗೆ ಆದರ್ಶವಾಗಬೇಕಾಗಿದ್ದು, ಛತ್ರಪತಿ ಶಿವಾಜಿ, ಸುಭಾಷ್‍ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ ವಿನಃ ಒಂದು ಕಪಾಳಕ್ಕೆ ಹೊಡೆದರೆ, ಇನ್ನೊಂದು ಕಪಾಳ ಕೊಡುವ ಗಾಂಧಿ ತತ್ವ ನಮಗೆ ಬೇಕಿಲ್ಲ. ಈ ದೇಶವನ್ನು ಒಡೆದು ಪಾಕಿಸ್ತಾನವನ್ನು ನಿರ್ಮಾಣ ಮಾಡಿರುವವರು ರಾಷ್ಟ್ರಪಿತರಾದದ್ದು ದುರದೃಷ್ಟಕರ. ದ್ವೇಷವನ್ನು ಹಚ್ಚಿದವರು, ಹಾಳು ಮಾಡಿದವರು ಮಹಾತ್ಮರಾದರು ಎಂದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ ಅವರು, ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಪೊಲೀಸರು ಎಂದ್ರೆ ದೇವದಾಸಿಯರು ಅಂತ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಅಂತ ಇದೇ ವೇಳೆ ಒತ್ತಾಯ ಮಾಡಿದ್ರು.

Share This Article
Leave a Comment

Leave a Reply

Your email address will not be published. Required fields are marked *