ಕೊಪ್ಪಳ: ಸಚಿವ ಶ್ರೀರಾಮುಲು ಅವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜಕೀಯ ವಿಚಾರದಲ್ಲಿ ಶ್ರೀರಾಮುಲು ಅವರಿಗೆ ನಾನೂ ಬೆಂಬಲವಾಗಿ ಇರುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಪಂಪಾ ಸರೋವರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನೆಗೊಂದಿ, ಪಂಪಾಸರೋವರ ಹಾಗೂ ಹಂಪಿ ಎಂದರೆ ನನಗೆ ಬಹಳ ಪ್ರೀತಿ. ರಾಮುಲು ಒಳ್ಳೆ ಅಭಿವೃದ್ಧಿ ಮಾಡುತ್ತಿದ್ದಾರೆ. ಇದು ರಾಜಕೀಯದ ಕುರಿತು ಬೇರೆ ವಿಷಯ ಮಾತಾನಾಡುವ ಸಮಯ ಅಲ್ಲ. ಇಡೀ ರಾಜ್ಯಕ್ಕೆ ಒಳ್ಳೆಯದಾಗಬೇಕಿದ್ದು, ಕಲ್ಯಾಣ ಕರ್ನಾಟಕ ಅಲ್ಲ ಇಡೀ ಕರ್ನಾಟಕ ಕಲ್ಯಾಣ ಆಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಡೋರ ಲಿಸ್ಟ್, ಬಿಜೆಪಿ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಯತ್ನಾಳ್
ರಾಮುಲು ಅವರೊಟ್ಟಿಗೆ ನಾನೂ ಹೆಜ್ಜೆ ಹಾಕುತ್ತಿದ್ದೇನೆ. ರಾಜಕೀಯ ವಿಚಾರದಲ್ಲಿ ಬರುವ ದಿನಗಳಲ್ಲಿ ನಾನು ಅವರೊಂದಿಗೆ ನಡೆಯಲಿದ್ದೇನೆ. ಹಿರಿಯರು ಹೇಳಿದಂತೆ ನಾನು ಕೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಶಿವರಾಮೇಗೌಡಗೆ ಜೆಡಿಎಸ್ನಿಂದ ಗೇಟ್ ಪಾಸ್: ಎಚ್ಡಿಕೆ