ಹಾವಿಗೆ ಭಯಗೊಂಡು ಮುಂದೆ ಹೋಗಲು ಹೆದರಿದ ಸವಾರರು – ಫುಲ್ ಟ್ರಾಫಿಕ್ ಜಾಮ್

Public TV
0 Min Read

ಬೆಂಗಳೂರು: ರಸ್ತೆ ಪಕ್ಕದಲ್ಲಿ ಬಿದ್ದಿರುವ ಹಾವನ್ನು ನೋಡಿ ವಾಹನ ಸವಾರರು ಮುಂದೆ ಹೋಗಲು ಹೆದರಿದ ಘಟನೆ ನಗರದ ಯಶವಂತಪುರ ಜಂಕ್ಷನ್‍ನಲ್ಲಿ ನಿರ್ಮಾಣವಾಗಿತ್ತು.

ಯಶವಂತಪುರದ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬ್ರಿಜ್ಡ್ ಕೆಳಗೆ ಇರುವ ರಸ್ತೆಯ ಪಕ್ಕದಲ್ಲಿ ಹಾವೊಂದು ಮಲಗಿತ್ತು. ಇದರಿಂದ ವಾಹನ ಸವಾರು ಹೆದರಿ ಮುಂದೆ ಹೋಗಲು ಪರದಾಡಿದ್ದಾರೆ.

ನಾಗರಹಾವಿನ ಬಾಲಕ್ಕೆ ಅಪರಿಚಿತ ವಾಹನ ತಗುಲಿದ್ದು, ಗಾಯವಾಗಿದೆ. ಆದ್ದರಿಂದ ಮುಂದೆ ಸಾಗಲು ಸಾಧ್ಯವಾಗದೇ ಆ ಸ್ಥಳ ಬಿಟ್ಟು ಕದಲುತ್ತಿರಲಿಲ್ಲ. ಹೀಗಾಗಿ ಯಶವಂತಪುರ ಜಂಕ್ಷನ್‍ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಮಾತ್ರ ವಾಹನ ನಿಲ್ಲಿಸಿ ನಾಗರಹಾವು ವೀಕ್ಷಿಸುವುದರಲ್ಲಿ ತೊಡಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *