ತಿರಂಗಾ ಯಾತ್ರೆಗೆ ಬಂದವರಿಗೆ ಫ್ರೀ ಪೆಟ್ರೋಲ್, ಹೆಲ್ಮೆಟ್ ಆಫರ್ – ಕೊಡದಿದ್ದಕ್ಕೆ ಬೈಕ್ ಸವಾರರ ಗಲಾಟೆ

Public TV
1 Min Read

ಚಿಕ್ಕಬಳ್ಳಾಪುರ: ತಿರಂಗಾ ಯಾತ್ರೆಗೆ ಬಂದ ಬೈಕ್ ಸವಾರರಿಗೆ ಫ್ರೀ ಪೆಟ್ರೋಲ್ ಹಾಗೂ ಫ್ರೀ ಹೆಲ್ಮೆಟ್ ಕೊಡ್ತೀವಿ ಅಂತ ಬಿಜೆಪಿ ಮುಖಂಡ ಆಫರ್ ಕೊಟ್ಟಿದ್ದು, ಫ್ರೀ ಪೆಟ್ರೋಲ್ ಹಾಕ್ತಿಲ್ಲ ಅಂತ ಬಂಕ್‌ನಲ್ಲಿ ಬೈಕ್ ಸವಾರರು ಗಲಾಟೆ ಮಾಡಿದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.

ಬಾಗೇಪಲ್ಲಿ-ಬೆಂಗಳೂರು ಹೈವೇಯಲ್ಲಿರುವ ಗಂಗೋತ್ರಿ ಪೆಟ್ರೋಲಿಯಂ ಬಂಕ್‌ಗೆ ಸಾವಿರಾರು ಜನ ಮುತ್ತಿಗೆ ಹಾಕಿ ಫ್ರೀ ಪೆಟ್ರೋಲ್ ಕೊಡ್ತೀರಾ ಇಲ್ವಾ ಅಂತ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದರು.

ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ ತಿರಂಗಾ ಬೈಕ್ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸಿ ಮುನಿರಾಜು ಅವರು ಆಯೋಜನೆ ಮಾಡಿದ್ದರು. ಇದನ್ನೂ ಓದಿ: ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು

 

ಈ ಹಿನ್ನೆಲೆ ಹಳ್ಳಿ ಹಳ್ಳಿಗಳಿಂದ ತಿರಂಗಾ ಯಾತ್ರೆಗೆ ಬರುವ ಬೈಕ್ ಸವಾರರಿಗೆ ಮೊದಲೇ ಸುಧಾಕರ್ ಹಾಗೂ ಮುನಿರಾಜು ಭಾವಚಿತ್ರ ಇರುವ ಟೋಕನ್ ಸ್ಟಿಕ್ಕರ್ ನೀಡಲಾಗಿತ್ತು. ಅದನ್ನು ತೋರಿಸಿ ಮೊದಲೇ ನಿಗದಿ ಮಾಡಿದ್ದ ಗಂಗೋತ್ರಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಬೇಕಾಗಿತ್ತು. ಜನರೂ ಸಹ ಬೆಳಗ್ಗೆಯಿಂದಲೇ ಬಂಕ್‌ಗೆ ಆಗಮಿಸಿ ಫ್ರೀ ಪೆಟ್ರೋಲ್ ಪಡೆದಿದ್ದಾರೆ. ಆದರೆ ರ‍್ಯಾಲಿಗೆ ಹೋಗಿಲ್ವಂತೆ! ಫ್ರೀ ಪೆಟ್ರೋಲ್ ಹಾಕಿಸಿಕೊಂಡು ಮನೆ ಕಡೆ ಹೊರಟಿದ್ದಾರಂತೆ.

ಈ ಹಿನ್ನೆಲೆ ದಿಢೀರ್ ಎಂದು ಫ್ರೀ ಪೆಟ್ರೋಲ್ ಆಫರ್ ಅನ್ನು ಸ್ಥಗಿತ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರರು ಫ್ರೀ ಪೆಟ್ರೋಲ್ ಹಾಕ್ತೀರಾ ಇಲ್ವಾ ಅಂತ ಗಲಾಟೆ ಮಾಡಿದ್ದಾರೆ. ನೂರಾರು ಮಂದಿ ಗಂಟೆಗಟ್ಟಲೆ ಗಲಾಟೆ ಮಾಡಿದರೂ ಫ್ರೀ ಪೆಟ್ರೋಲ್ ಹಾಕಿಲ್ಲ. ಕಾರ್ಯಕ್ರಮ ಮುಕ್ತಾಯವಾಗಿದ್ದು ಇನ್ನು ಪೆಟ್ರೋಲ್ ಹಾಕಲು ಆಗುವುದಿಲ್ಲ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

ಕಾರ್ಯಕ್ರಮ ಮುಗಿದ ಬಳಿಕ ಸಚಿವ ಸುಧಾಕರ್ ಮೂಲಕ ಕೆಲವರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಣೆ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *