ಸಿದ್ದರಾಮಯ್ಯ ಪ್ರಯೋಗಿಸಿದ `ಅಸಮಾಧಾನ’ದ ಕ್ಷಿಪಣಿಗೆ ಜೆಡಿಎಸ್ ತತ್ತರ

Public TV
1 Min Read

ಬೆಂಗಳೂರು: ಮಾಜಿ ಸಿಎಂ ಪ್ರಯೋಗಿಸಿದ `ಅಸಮಾಧಾನ’ದ ಕ್ಷಿಪಣಿಗೆ ಜೆಡಿಎಸ್ ತತ್ತರವಾಗಿದ್ದು, ಸಿದ್ದರಾಮಯ್ಯರ ಮೇಲೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆಂಡಮಂಡಲವಾಗಿದ್ದಾರಂತೆ.

ಜೆಡಿಎಸ್‍ ನಲ್ಲಿ ಸಚಿವರು, ಶಾಸಕರು ಬಾಯಿಯನ್ನೇ ಬಿಡುತ್ತಿಲ್ಲ. ಯಾರೊಬ್ಬರೂ ಸರ್ಕಾರದ ಪರ ವಹಿಸಿಕೊಂಡು ಮಾತೇ ಆಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದು ಟೀಂನಿಂದ ದಿನದಿಂದ ದಿನಕ್ಕೆ ಟಾಕ್ ಫೈಟ್ ನಡೆಯುತ್ತಿದೆ. ಆದರೆ ಜೆಡಿಎಸ್ ಶಾಸಕರು ಮಾತ್ರ ಎಲ್ಲದಕ್ಕೂ ಫುಲ್ ಸೈಲೆಂಟ್ ಆಗಿದ್ದಾರೆ. ಇದರಿಂದ ಮಾಜಿ ಪ್ರಧಾನಿ ದೇವೇಗೌಡ ಕೆಂಡಮಂಡಲವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

ಎಲ್ಲದಕ್ಕೂ ನಾವು ಅಪ್ಪ, ಮಕ್ಕಳೇ ಉತ್ತರ ಕೊಡಬೇಕಾ..? ಬಾಯಿಬಡ್ಕೋಬೇಕಾ..? ಪಕ್ಷದಲ್ಲಿ ಇರುವ ಹಿರಿಯರು, ಸಚಿವರು, ಶಾಸಕರು ಏನ್ ಮಾಡುತ್ತಿದ್ದಾರೆ..? ಯಾವುದೇ ವಿಚಾರಕ್ಕೂ ಒಬ್ಬರಿಂದಲೂ ಪಕ್ಷ ಸಮರ್ಥನೆಯ ಮಾತೇ ಇಲ್ಲ. ಮೌನವಾಗಿರೋದು ಸಾಕು, ಹಿಂಗೆ ಇದ್ದರೆ ಪಕ್ಷ ಉಳಿಯಲ್ಲ ಎಂದು ದೇವೇಗೌಡು ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *