ನಮ್ ಬಾಸ್ ಇಲ್ಲೇ ಇದ್ದಾರೆ, ನಾನ್ ಇಲ್ಲಿಂದ ಹೋಗಲ್ಲ – ಸ್ವಾಮಿ ನಿಷ್ಠೆ ಮೆರೆದ ರೆಡ್ಡಿ ಪಿಎ ಅಲಿಖಾನ್

Public TV
2 Min Read

ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರೋ ಮಾಜಿ ಗಣಿಧಣಿ ಜನಾರ್ದನ ರೆಡ್ಡಿ ಅವರ ಪಿಎ ಅಲಿಖಾನ್ ಸ್ವಾಮಿನಿಷ್ಠೆ ಮೆರೆದಿದ್ದಾರೆ.

ರೆಡ್ಡಿ ವಿಚಾರಣೆಯಾಗುತ್ತಿದ್ದಂತೆಯೇ ಅಲಿಖಾನ್ ನನ್ನು ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಅಲಿಖಾನ್, ನಮ್ಮ ಬಾಸ್ ಇಲ್ಲೇ ಇದ್ದಾರೆ. ಹೀಗಾಗಿ ನಾನೂ ಇಲ್ಲೇ ಇರುತ್ತೀನಿ. ನಮ್ಮ ಬಾಸ್ ನ ಬಿಟ್ಟು ಹೋಗಲ್ಲ ಅಂತ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ ಕಷ್ಟದ ವೇಳೆಯೂ ಶಿಷ್ಯ ಆಲಿಖಾನ್ ಗಣಿಧಣಿಗೆ ನಿಷ್ಠೆ ಮೆರೆದಿದ್ದಾನೆ ಎಂದು ಹೇಳಲಾಗುತ್ತಿದೆ.

ರೆಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಖಾನ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಆದ್ರೆ ಸದ್ಯ ಅಲಿಖಾನ್ , ಜನಾರ್ದನ ರೆಡ್ಡಿ ಜೊತೆಯೇ ಸಿಸಿಬಿ ಕಚೇರಿಯಲ್ಲಿದ್ದಾನೆ.

ಅಲಿಖಾನ್ ಅರೆಸ್ಟ್:
ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜೊತೆ ಸಿಸಿಬಿ ಅಧಿಕಾರಿಗಳ ಬಳಿ ಆಗಮಿಸಿದ್ದ ಅಲಿಖಾನ್ ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅಲಿಖಾನ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದರು. ಅಲಿಕಾನ್ ವಿರುದ್ಧ ನಿನ್ನೆ ಬೆಳಗ್ಗೆಯೇ ಅಕ್ರಮ ಶಸ್ತ್ರಾಸ್ತ್ರದ ಕಾಯ್ದೆಯಡಿ ಸಿಸಿಬಿ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಹೀಗಾಗಿ ರೆಡ್ಡಿ ಜೊತೆ ಬಂದ ಅಲಿಖಾನ್ ನನ್ನು ಸಿಸಿಬಿ ಬಂಧಿಸಿತ್ತು. ಅಲಿಖಾನ್ ಹೊಂದಿರುವ ಶಸ್ತ್ರಾಸ್ರ ಪರವಾನಿಗೆ 2017ರಲ್ಲಿ ಅಂತ್ಯಗೊಂಡಿತ್ತು. ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಲಿಖಾನ್ ಬಂಧನವಾಗಿದೆ. ಅಲಿಖಾನ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ 5 ಜೀವಂತ ಗುಂಡುಗಳು ಪತ್ತೆಯಾಗಿದ್ದವು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಆಂಬಿಡೆಂಟ್ ಡೀಲ್ ಪ್ರಕರಣದ ಸೂತ್ರಧಾರಿ ಆಗಿರುವ ಅಲಿಖಾನ್ ಜಾಮೀನು ಸಹ ಪಡೆದುಕೊಂಡಿದ್ದ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಜನಾರ್ದನ ರೆಡ್ಡಿ ಜೊತೆಯಲ್ಲಿ ಅಲಿಖಾನ್ ಸಿಸಿಬಿ ಕಚೇರಿಗೆ ಆಗಮಿಸುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *