ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ತಿಂಗಳು ಕಾಲ ರೈತರು ಪ್ರತಿಭಟಿಸಿದ್ದಾರೆ. ಕೇಂದ್ರ ಸರ್ಕಾರ ಅಮಾನುಷವಾಗಿ ನಡೆದುಕೊಂಡಿದೆ. ಲಖೀಂಪುರ ಘಟನೆಯೇ ಇದಕ್ಕೆ ಉತ್ತಮ ನಿದರ್ಶನ. ಕೇಂದ್ರ ಸಚಿವರ ಮಗನೇ ಕಾರು ಹತ್ತಿಸಿ ಕೊಂದ. ಇದೀಗ ವಿಧಿ ಇಲ್ಲದೆ ಕಾಯ್ದೆ ವಾಪಸ್ ಪಡೆದಿದೆ. ರೈತರು ಮತ್ತು ವಿರೋಧ ಪಕ್ಷದ ಹೋರಾಟಕ್ಕೆ ಸಿಕ್ಕ ಜಯ. ರೈತರ ವಿರುದ್ಧ ಕಾನೂನು ತೆಗೆದುಕೊಂಡಿತ್ತು ಎಂದರು.

ರೈತರ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯಿರಿ. ಉಪಚುನಾವಣೆಯಲ್ಲಿ ಸೋತಿದ್ದಕ್ಕೆ ಪೆಟ್ರೋಲ್ ಕಡಿಮೆ ಮಾಡಿದ್ರು. ಚುನಾವಣೆಯಲ್ಲಿ ಸೋಲುವ ಭಯಕ್ಕೆ ಇದೀಗ ಕಾಯ್ದೆ ವಾಪಸ್ ಪಡೆದಿದ್ದಾರೆ. ನಿರಂತರ ಹೋರಾಟದಿಂದ ಜಯ ಸಾಧಿಸಿದ್ದಾರೆ. ರೈತರನ್ನು ದೇಶದ್ರೋಹಿಗಳು ಅಂದರು. ಬಿಜೆಪಿಗೆ ಸೋಲಾಗಿದೆ. ಇದು ರೈತರಿಗೆ ಸಿಕ್ಕ ಜಯ. ಮತ್ತೊಂದು ಸ್ವಾತಂತ್ರ್ಯ ಹೋರಾಟದ ಜಯ ಇದು. ಬಿಜೆಪಿಗೆ ವಕ್ರ ದೆಶೆ, ಕಾಂಗ್ರೆಸ್ಸಿಗೆ ಶುಕ್ರ ದೆಶೆ ಅಂತ ಹೇಳುವುದಿಲ್ಲ. ಒಟ್ಟಿನಲ್ಲಿ ಇದು ರೈತರ ಜಯ ಅಷ್ಟೇ ಎಂದು ಸಿದ್ದರಾಮಯ್ಯ ತಿಳಿಸಿದರು.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ವಾಪಸ್ ಪಡೆದಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹಾಗಾಗಿ ಹೆದರಿ ಈ ಕಾಯ್ದೆ ಹಿಂಪಡೆದಿದ್ದಾರೆ. ಬೆಲೆ ಇಳಿಸಿದ್ದೂ ಚುನಾವಣೆ ಸೋತಿದ್ದಕ್ಕೆ. ರೈತರ ಹೋರಾಟಕ್ಕೆ ಮಣಿದಿದ್ದಾರೆ. ಹೋರಾಟ ಹತ್ತಿಕ್ಕಲು ಬಹಳ ಪ್ರಯತ್ನ ಮಾಡಿದ್ರು. ಇವರ ಪ್ರಯತ್ನಕ್ಕೆ ರೈತರು ಮಣಿಯಲಿಲ್ಲ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಇವರಿಗೆ ತೀವ್ರ ಮುಖಭಂಗವಾಗಿದೆ. ಈ ಜಯ ರೈತರಿಗೆ ಸಿಕ್ಕ 2ನೇ ಸ್ವಾತಂತ್ರ್ಯ. ಕಾಂಗ್ರೆಸ್ ಅಭಿಪ್ರಾಯದಂತೆ ಇದು ಸ್ವಾತಂತ್ರ್ಯ ಹೋರಾಟ ಎಂದು ಬಣ್ಣಿಸಿದರು.

Share This Article
Leave a Comment

Leave a Reply

Your email address will not be published. Required fields are marked *