ನನ್ನ ಸುದ್ದಿಗೆ ಬಂದ್ರೆ ಕೈ-ಕಾಲು ಮುರಿತೀನಿ, ತಲೆ ತೆಗೆಯೋಕೆ ರೆಡಿ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್ಚರಿಕೆ

Public TV
1 Min Read

ಚಿಕ್ಕಬಳ್ಳಾಪುರ: ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ ನನ್ನ ವಿಚಾರಕ್ಕೆ ಬಂದ್ರೆ ನಾನು ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇತ್ತೀಚೆಗೆ ಗೌರಿಬಿದನೂರು ಕ್ಷೇತ್ರದ ಹಾಲಿ ಶಾಸಕ ಶಿವಶಂಕರರೆಡ್ಡಿ ಜೊತೆ ರವಿನಾರಾಯಣರೆಡ್ಡಿ ಹೊಂದಾಣಿಕೆ ರಾಜಕಾರಣ ಮಾಡ್ತಾರೆ ಎಂದು ಕೆಎಚ್‍ಪಿ ಬಣದ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆ ಇಂದು ರವಿನಾರಾಯಣರೆಡ್ಡಿ ಗೌರಿಬಿದನೂರು ನಗರದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ, ನನ್ನ ಸುದ್ದಿಗೆ ಬಂದ್ರೆ ಕೈ ಕಾಲು ಮುರಿತೀನಿ. ತಲೆ ತೆಗೆಯೋಕೂ ರೆಡಿ. ನಾನು ಜೈಲಿಗೆ ಹೋಗೋಕು ಸಿದ್ಧ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

ನಾನು ಮೊದಲಿನ ರವಿಣ್ಣನೇ. ನಾನು ಏನ್ ಹೇಳ್ತಿನೋ, ಅದು ನಾನು ಮಾಡೇ ಮಾಡ್ತೀನಿ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಶಿವಶಂಕರರೆಡ್ಡಿ ನನ್ನ ಶತ್ರು. ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳೋ ಅವಶ್ಯಕತೆ ನನಗಿಲ್ಲ. ರಾಜಕೀಯ ಇಲ್ಲ ಅಂದ್ರೂ ಪರವಾಗಿಲ್ಲ. ಅವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿವಶಂಕರರೆಡ್ಡಿ ಜೊತೆ ಹೊಂದಾಣಿಕೆ ಅಂತ ಹೇಳಿ ನನ್ನ ವ್ಯಕ್ತಿತ್ವ ವಧೆ ಮಾಡಬೇಡಿ. ಒಂದು ವೇಳೆ ಇದೇ ಮುಂದುವರೆದರೆ ನಾನು ಕೈ ಕಾಲು ತಲೆ ತೆಗೆಯೋಕೂ ರೆಡಿ ಎಂದಿದ್ದಾರೆ. ಶಿವಶಂಕರರೆಡ್ಡಿ ಹಾಗೂ ರವಿನಾರಾಯಣರೆಡ್ಡಿ ಸಂಬಂಧಿಗಳಾದ್ರೂ ಮೊದಲಿಂದಲೂ ರಾಜಕೀಯ ವಿರೋಧಿಗಳಾಗಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

Share This Article
Leave a Comment

Leave a Reply

Your email address will not be published. Required fields are marked *