ಬೆದರಿಕೆ ಹಾಕಿದ್ದಕ್ಕೆ ಬಾಲ್ಕನಿಯಿಂದ ತಳ್ಳಿ ಕೊಲೆಗೈದೆ- ತಪ್ಪೊಪ್ಪಿಕೊಂಡ ಅರ್ಚನಾ ಬಾಯ್‍ಫ್ರೆಂಡ್

Public TV
1 Min Read

ಬೆಂಗಳೂರು: ದುಬೈನಿಂದ ಬಂದು ಬೆಂಗಳೂರಿನಲ್ಲಿ ಮೃತಪಟ್ಟ ಗಗನಸಖಿ (Air Hostess) ಅರ್ಚನಾ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಪೊಲೀಸರು ಆಕೆಯ ಬಾಯ್‍ಫ್ರೆಂಡ್ ಆದೇಶ್‍ (Adesh) ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಕೊಲೆಗೈದಿದ್ದು ಯಾಕೆ?: ಮದುವೆ ಆಗಲು ಒಪ್ಪದಿದ್ದರೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸುತ್ತೇನೆ ಎಂದು ಅರ್ಚನಾ ಈ ಹಿಂದೆ ಬೆದರಿಕೆ ಹಾಕಿದ್ದಳು. ಆ ಬಳಿಕ ಮೃತಪಟ್ಟ ದಿನವೂ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದವು. ಇದರಿಂದ ಸಿಟ್ಟಿಗೆದ್ದ ನಾನು ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಹತ್ಯೆ ಮಾಡಿದೆ ಎಂದು ಆದೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬಾಯ್‍ಫ್ರೆಂಡ್ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್

ಹಿಮಾಚಲಪ್ರದೇಶ ಮೂಲದ ಗಗನಸಖಿ ಅರ್ಚನಾ ಧೀಮನ್ (28) ಕೋರಮಂಗಲ (Koramangala) ದ 8ನೇ ಬ್ಲಾಕ್‍ನ ರೇಣುಕಾ ರೆಸಿಡೆನ್ಸಿ ಅಪಾರ್ಟ್ ಮೆಂಟ್‍ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ ಅರ್ಚನಾ ಮೃತಪಟ್ಟ ಬಳಿಕ ಆಕೆಯ ಬಾಯ್‍ಫ್ರೆಂಡ್ ಮೇಲೆ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ತಿರುವು ದೊರೆಯಿತು. ಇದನ್ನೂ ಓದಿ: ಗಗನಸಖಿ ಗೆಳತಿಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಆತ್ಮಹತ್ಯೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್‌

Share This Article
Leave a Comment

Leave a Reply

Your email address will not be published. Required fields are marked *