ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಹೀಗೆ

Public TV
1 Min Read

ಬೆಳಗಾವಿ: ನಾವು ಸೀರೆಗಾಗಿ ಹಣ ಖರ್ಚು ಮಾಡಲ್ಲ. ಬದಲಿಗೆ ಬಸವಣ್ಣನವರು ವಿಚಾರಗಳನ್ನು ಸಾರಲು ಪ್ರತಿ ತಿಂಗಳು ಲಕ್ಷ ಹಣ ಖರ್ಚು ಮಾಡುತ್ತೇವೆ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಜಾರಕಿಹೊಳಿ ಅಭಿಮಾನಿ ಸಂಘದಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡವರಿಗೆ, ಅನಾಥಾಶ್ರಮಗಳಿಗೆ ಪ್ರತಿ ತಿಂಗಳು ಲಕ್ಷ ಹಣ ಖರ್ಚು ಮಾಡುತ್ತೇನೆ. ರಾಜಕೀಯ ಲಾಭಕ್ಕಾಗಿ ಈಗಾಗಲೇ ಸೀರೆ ಹಂಚುವ ಕೆಲಸ ಶುರುವಾಗಿದೆ. ಅದು ಕೇವಲ 70 ರೂಪಾಯಿ ಸೀರೆ. ಆದರೆ ಕಾಲ ಬಂದ್ರೆ ನಾವು 200 ರೂಪಾಯಿ ಸೀರೆ ಹಂಚಲು ಸಿದ್ಧರಿದ್ದೇವೆ ಎಂದರು.

ರಾಜಕೀಯ ಲಾಭಕ್ಕೆ ಸೀರೆಗಳನ್ನ ಹಂಚಲ್ಲ. ಸಮಾಜಕ್ಕಾಗಿ ದುಡಿಯಬೇಕು. ನಮ್ಮ ಹತ್ತಿರ ಜನ, ಹಣ, ಸಿದ್ಧಾಂತ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಪರ ಇರುವ ಸರ್ಕಾರ ಬರಬೇಕು. ರಾಜಕೀಯದಲ್ಲಿ ದುಡ್ಡು ಮುಖ್ಯವಲ್ಲ ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾನು ಎಐಸಿಸಿ ಕಾರ್ಯದರ್ಶಿ ಹಾಗು ತೆಲಂಗಾಣ ಉಸ್ತುವಾರಿ ಹುದ್ದೆ ಪಡೆದಿದ್ದು 40 ವರ್ಷದ ಕಠಿಣ ಪರಿಶ್ರಮದಿಂದ. ನನ್ನ 40 ವರ್ಷದ ಜೀವನದಲ್ಲಿ ರಾಜಕೀಯ ಮಾಡುವ ಬದಲು ಸಮಾಜವನ್ನ ಕಟ್ಟುವ ಕೆಲಸ ಮಾಡಿದ್ದೇನೆ. ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದಾಗ ಬಹಳಷ್ಟು ಕೆಲಸಗಳನ್ನ ಮಾಡಿದ್ದೇನೆ ಎಂದರು.

ರೈತರು, ವಿದ್ಯಾರ್ಥಿಗಳು, ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕಾರ್ಯ ವೈಖರಿ ನೋಡಿ ಸೋನಿಯಾ ಗಾಂಧಿಯವರು ವಿವಿಧ ಹುದ್ದೆಗೆಳನ್ನ ನೀಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಹೇಗೆ ಇದ್ದೆ ಇಗಲು ಹಾಗೆ ಇದ್ದೇನೆ. ರಾಜಕೀಯ ಅಷ್ಟೇ ಅಲ್ಲದೆ ಸಾಮಾಜಿಕ ಕಾರ್ಯಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ. ಜನರ ಪ್ರೀತಿ ವಿಶ್ವಾಸ ಮಾತ್ರ ಶಾಶ್ವತ. 20 ವರ್ಷಗಳಿಂದ ಮೂಢನಂಬಿಕೆಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *