ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

Public TV
1 Min Read

ಮೈಸೂರು: ವಿಚಿತ್ರವಾಗಿ ವರ್ತಿಸುತ್ತಿದ್ದ ಮಹಿಳೆ ಮೈಮೇಲೆ ದೆವ್ವಬಂದಿದೆ ಎಂದು ತಿಳಿದು ಪೂಜಾರಿಯೊಬ್ಬ ಹಿಗ್ಗಾಮಗ್ಗಾ ಥಳಿಸಿದ್ದಾನೆ.

ಪಿರಿಯಾಪಟ್ಟಣ ತಾಲೂಕಿನ ನಾಗನಹಳ್ಳಿಪಾಳ್ಯದ ನಿವಾಸಿ ಶಾರದಾ ಅನಾರೋಗ್ಯದಿಂದ ಬಳಲುತ್ತಿದ್ದು, ವಿಚಿತ್ರವಾಗಿ ವರ್ತಿಸುತ್ತಿದ್ದರು. ಈ ಕಾರಣದಿಂದ ಸೆ.30 ರಂದು ಬೆಟ್ಟದಪುರದ ಶನೇಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು.

ಆರೋಪಿ ಪೂಜಾರಿ ಕುಮಾರ್ ಎಂಬಾತ ಶಾರದ ಅವರ ಮೈಮೇಲೆ ದೆವ್ವ ಬಂದಿದೆ. ಈ ದೆವ್ವವನ್ನು ಬಿಡಿಸುತ್ತೇನೆ ಎಂದು ಹೇಳಿ ಕೋಲಿನಿಂದ ಮೈಯೆಲ್ಲಾ ಬಾಸುಂಡೆ ಬರುವಂತೆ ಹಿಗ್ಗಾಮಗ್ಗಾ ಥಳಿಸಿದ್ದಾನೆ. ನಂತರ ಶಾರದ ಪ್ರಜ್ಞೆ ತಪ್ಪಿದಾಗ ದೆವ್ವ ಬಿಟ್ಟಿದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸೂಚಿಸಿದ್ದಾನೆ.

ಶಾರದಗೆ ದೆವ್ವ ಬಿಡಿಸುವ ನೆಪ ಹೇಳಿ ಹಿಗ್ಗಾಮಗ್ಗಾ ಥಳಿಸಿದ್ದರಿಂದ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆಂದು ಕುಮಾರ್ ವಿರುದ್ಧ ಬೆಟ್ಟದಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *